ಬ್ರಹ್ಮಸ್ಥಾನ ಗರೋಡಿ ಕೊಡಿಪಾಡಿ: ಭಕ್ತಿ ಪರಾಕಾಷ್ಠೆಯ ನಡುವೆ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಬ್ರಹ್ಮಕಲಶೋತ್ಸವ!- ಸಾವಿರಾರು ಮಂದಿ ಭಾಗಿ
ಸುರತ್ಕಲ್: ಕರಾವಳಿಯ ಆರಾಧ್ಯ ದೈವಗಳಾದ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ಸನ್ನಿಧಿಯಾದ ಸುರತ್ಕಲ್ನ ಕೊಡಿಪಾಡಿ ಬ್ರಹ್ಮಸ್ಥಾನ ಗರೋಡಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗುತ್ತಿವೆ. ಹಸಿರು ತೋರಣಗಳಿಂದ ಸಿಂಗಾರಗೊಂಡಿರುವ ಗರೋಡಿಯ ಆವರಣದಲ್ಲಿ ಭಕ್ತಾದಿಗಳ ಜಯಘೋಷ ಮೊಳಗುತ್ತಿದ್ದು, ಧಾರ್ಮಿಕ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರುತ್ತಿವೆ.…