ಕರಾವಳಿಯಾದ್ಯಂತ ಸಡಗರದ ಬಕ್ರೀದ್: ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆಯ ‘ಈದುಲ್ ಅಝ್‌ಹಾ’ ಆಚರಣೆ!

ಮಂಗಳೂರು/ಉಡುಪಿ: ತ್ಯಾಗ ಹಾಗೂ ಬಲಿದಾನದ ದಿವ್ಯ ಸಂಕೇತವಾಗಿರುವ ಪವಿತ್ರ ‘ಈದುಲ್ ಅಝ್‌ಹಾ’ (ಬಕ್ರೀದ್) ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ಇಂದು ಅತ್ಯಂತ ಶ್ರದ್ಧೆ, ಸಡಗರ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ಕರಾವಳಿಯ ನೂರಾರು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ವಿಶೇಷ ಈದ್ ನಮಾಝ್ ಮತ್ತು ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವೈಭವ ಮತ್ತು ಗಣ್ಯರ ಭೇಟಿ:
ನಗರದ ಐತಿಹಾಸಿಕ ಬಾವುಟಗುಡ್ಡದ ಈದ್ಗಾ ಮಸ್ಜಿದ್‌ನಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಖುತುಬಾ ಪಾರಾಯಣ ಜರುಗಿತು. ಹಾಗೆಯೇ, ಝೀನತ್ ಬಕ್ಷ್ ಮಸ್ಜಿದ್‌ನ ಖತೀಬ್ ಸೈಯದ್ ಶಂಶುದ್ದೀನ್ ಬಾಸಿತ್ ಬಾ ಅಲವಿ ತಂಙಳ್ ಅಲ್ ಅನ್ಸಾರಿ ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಈದ್ಗಾಕ್ಕೆ ಭೇಟಿ ನೀಡಿ ಸೌಹಾರ್ದ ಶುಭ ಹಾರೈಸಿದರು.

ಉಳ್ಳಾಲದ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಮಂಗಳೂರಿನ ಪಂಪ್‌ವೆಲ್, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್, ಕಂಕನಾಡಿ, ಬಂದರ್, ಕುದ್ರೋಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಜುಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಮುಸ್ಲಿಂ ಬಾಂಧವರು ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ದಫನ ಭೂಮಿಗೆ (ಕಬರಸ್ತಾನ್) ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉಡುಪಿ ಮತ್ತು ಹೆನ್ನಾಬೈಲ್‌ನಲ್ಲಿ ಸಾಮೂಹಿಕ ಪ್ರಾರ್ಥನೆ:
ಉಡುಪಿ ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಕಳೆ ಕಟ್ಟಿತ್ತು. ಉಡುಪಿ ನಗರ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಸೇರಿದಂತೆ ವಿವಿಧ ತಾಲೂಕುಗಳ ಮಸೀದಿಗಳಲ್ಲಿ ಹಬ್ಬದ ವಿಶೇಷ ನಮಾಝ್ ನೆರವೇರಿತು. ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ‌್ರಶೀದ್ ನದ್ವಿ ಹಾಗೂ ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ಅವರ ನೇತೃತ್ವದಲ್ಲಿ ನಮಾಝ್ ನಡೆಯಿತು.

ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್ ಭಾಗವಹಿಸಿದ್ದರು. ಕುಂದಾಪುರದಲ್ಲಿ ಬೆಳಗ್ಗೆ ಆಕರ್ಷಕ ‘ಈದ್ ಮೆರವಣಿಗೆ’ ನಡೆದು, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಧರ್ಮಗುರು ಮೌಲಾನಾ ಅಬ್ದುಲ್ ಹಫೀಝ್ ಅವರು ಐತಿಹಾಸಿಕ ಪ್ರವಾದಿ ಇಬ್ರಾಹಿಮ್ ಅವರ ತ್ಯಾಗದ ದೃಷ್ಟಾಂತವನ್ನು ಸ್ಮರಿಸಿದರು.

ಧರ್ಮಗುರುಗಳಿಂದ ಜಾಗೃತಿ ಮತ್ತು ಸೌಹಾರ್ದ ಸಂದೇಶ:
ಈ ಬಾರಿಯ ಈದ್ ಸಂದೇಶದಲ್ಲಿ ಧರ್ಮಗುರುಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜಕ್ಕೆ ಅತ್ಯಂತ ಮಹತ್ವದ ಸಂದೇಶಗಳನ್ನು ನೀಡಿದರು. ಶಾಂತಿ ಮತ್ತು ಸಹಜೀವನ: ಹಬ್ಬದ ಆಚರಣೆಯು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಧರ್ಮೀಯರೊಂದಿಗಿನ ಸಹಜೀವನಕ್ಕೆ ಪೂರಕವಾಗಿರಬೇಕು ಎಂದು ಕರೆ ನೀಡಿದರು. ಪ್ರಸ್ತುತ ಯುವ ಪೀಳಿಗೆ ಮಾದಕ ದ್ರವ್ಯಗಳ (ಡ್ರಗ್ಸ್) ವ್ಯಸನಕ್ಕೆ ಬಲಿಯಾಗದಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಧರ್ಮಗುರುಗಳು ಕಳಕಳಿ ವ್ಯಕ್ತಪಡಿಸಿದರು.

ಸಂಚಾರ ನಿಯಮಗಳ ಪಾಲನೆ:
ಹೆಲ್ಮೆಟ್ ಹಾಗೂ ಚಾಲನಾ ಪರವಾನಗಿ (ಲೈಸನ್ಸ್) ಇಲ್ಲದೆ ಅತಿವೇಗವಾಗಿ ದ್ವಿಚಕ್ರ ಮತ್ತು ಕಾರು ಚಲಾಯಿಸುವ ಮಕ್ಕಳ ಮೇಲೆ ಪೋಷಕರು ವಿಶೇಷ ನಿಗಾ ಇಡಬೇಕು ಹಾಗೂ ಅಪಘಾತಗಳನ್ನು ತಪ್ಪಿಸಬೇಕು ಎಂದು ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯ ಇಮಾಮ್ ಮೌಲಾನಾ ಒಬೈದುರ್ ರಹ್ಮಾನ್ ನದ್ವಿ ಎಚ್ಚರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್:
ಹಬ್ಬದ ದಿನದಂದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿರಿಯರು-ಕಿರಿಯರು ಎನ್ನದೆ ಎಲ್ಲರೂ ಹೊಸ ಬಟ್ಟೆ ಧರಿಸಿ, ಪರಸ್ಪರ ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆಯ ಹಬ್ಬಕ್ಕೆ ಸಾಕ್ಷಿಯಾದರು.

 

ಲಾಲ್‌ಬಾಗ್ ಮೈದಾನದಲ್ಲಿ ಐಪಿಎಲ್ ಫೈನಲ್ ಜಂಗಿ ಕುಸ್ತಿ, ಬಿಗ್ ಸ್ಕ್ರೀನ್‌ನಲ್ಲಿ ಉಚಿತ ವೀಕ್ಷಣೆ!

ಮಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ʻಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ (TATA IPL…

ಮಂಗಳೂರಿನಲ್ಲಿ ಜೂನ್ 4 ರಿಂದ ರಾಷ್ಟ್ರೀಯ ʻಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026′ ಬ್ರಿಡ್ಜ್ ಪಂದ್ಯಾವಳಿ

ಮಂಗಳೂರು: ಕಾರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯನ್ನು…

ಪೊಲೀಸರ ಮೇಲೆ ಸಿಮೆಂಟ್ ಶೀಟ್ ನಿಂದ ಹಲ್ಲೆಗೈದಿದ್ದ ಖದೀಮರು ಅಂದರ್!

ಮಂಗಳೂರು: ರಾತ್ರಿ ಬೀಟ್ ಕರ್ತವ್ಯದ ಪೊಲೀಸ್ ಸಿಬ್ಬಂದಿಗಳ ಮೇಲೆ ಸಿಮೆಂಟ್ ಶೀಟ್ ತುಂಡಿನಿಂದ ಹಲ್ಲೆ ನಡೆಸಿ ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು…

ಜಾಗ ಅತಿಕ್ರಮಣ- ಕೋಟ್ಯಾನ್ ಹಸ್ತಕ್ಷೇಪದ ಆರೋಪ: ‘ಸೆಲ್ಫ್ ಡಿಫೆನ್ಸ್’ ಸಮರ ಸಾರಿದ ರಾಬರ್ಟ್‌ ರೊಸಾರಿಯೋ!

ಮೂಡುಬಿದಿರೆ: ಮುಂಬೈನಲ್ಲಿ ನೆಲೆಸಿರುವ ಕರಾವಳಿ ಮೂಲದ ಅನಿವಾಸಿ ಭಾರತೀಯರೊಬ್ಬರ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಸ್ಥಳೀಯ ಪ್ರಭಾವಿಗಳು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿದ್ದು,…

ಬಿಜೈ ಆನೆಗುಂಡಿ, ಕೊಡಿಯಾಲ್‌ಗುತ್ತು ಕೊಳಚೆ ನೀರಿನ ಸಮಸ್ಯೆಗೆ ʻವೆಟ್‌ವೆಲ್’; KUIDFC ವತಿಯಿಂದ ಸ್ಥಳಪರಿವೀಕ್ಷಣೆ!

ಮಂಗಳೂರು: ಮಂಗಳೂರಿನ ಬಿಜೈ ಆನೆಗುಂಡಿ ಬ್ರಿಜ್ ಕಾಲುವೆ ಹಾಗೂ ಕೊಡಿಯಾಲ್‌ಗುತ್ತು ಬ್ರಿಜ್ ಕಾಲುವೆಗಳಲ್ಲಿ ಮಲಿನ ನೀರು ಮತ್ತು ಒಳಚರಂಡಿ ತ್ಯಾಜ್ಯ ನಿರಂತರವಾಗಿ…

ಕುರ್ಚಿ ಬಿಡಲು ಸಿದ್ದರಾಮಯ್ಯ‌ ವಿಧಿಸಿದ 4 ಕಠಿಣ ಷರತ್ತುಗಳು!!! ಡಿ.ಕೆ.ಶಿ. ಸಿಎಂ ಹಾದಿಗೆ ಮುಳ್ಳು ಹಾಸಿದ ಸಿದ್ದು ಪಾಳಯ!

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮಹಾ ಭೂಕಂಪ ಸಂಭವಿಸುವ ಮುನ್ಸೂಚನೆಗಳು ದಟ್ಟವಾಗಿವೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸರಣಿ ಸಭೆಗಳ ಬಳಿಕ…

ಉಡುಪಿ: ಮಾಜಿ ರೌಡಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆಶೀರ್ವಾದ? ವಿಡಿಯೋ ವೈರಲ್!

ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಮತ್ತೊಮ್ಮೆ ಹೊಸ ವಿವಾದದ ಸುಳಿಗೆ ಸಿಲುಕಿದ್ದಾರೆ. ಮಾಜಿ ರೌಡಿ…

ಅಮ್ಮಾ ನಾನು ಬರ್ತಿದ್ದೀನಿ!: 20 ವರ್ಷಗಳ ಕಣ್ಣೀರು, 34 ಕೋಟಿಯ ಕರುಣೆ: ಸೌದಿ ಜೈಲಿನಿಂದ ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ!

ರಿಯಾದ್: ಆ ಹೆತ್ತ ಕರುಳಿನ ಎರಡು ದಶಕಗಳ ಕಣ್ಣೀರಿಗೆ ಕೊನೆಗೂ ಕಾಲ ಒಲಿದಿದೆ. ಹೆತ್ತ ಮಗನ ಮುಖ ನೋಡಲು ಇಪ್ಪತ್ತು ವರ್ಷಗಳಿಂದ…

ಪ್ರಿಯಾಂಕಾ ವಾಧ್ರಾ ಸಂಧಾನ ಯಶಸ್ಸು! ಕೊನೆಗೂ ಕನಕಪುರ ಬಂಡೆಗೆ ಒಲಿಯಿತಾ ಸಿಎಂ ಪಟ್ಟ! ಸಿದ್ದುಗೆ ರಾಜ್ಯಸಭಾ- ಯತೀಂದ್ರ ಸಂಪುಟ ಸ್ಥಾನ?

ನವದೆಹಲಿ/ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೊಗೆಯಾಡುತ್ತಿದ್ದ ಮುಖ್ಯಮಂತ್ರಿ ಕುರ್ಚಿಯ ಮಹಾ ಸಮರ ಈಗ ಅಂತಿಮ ಹಂತಕ್ಕೆ ತಲುಪಿದೆ! ಸಿಎಂ…

error: Content is protected !!