ಕಾಂತಪುರಂ ಮುಸ್ಲಿಯಾರ್‌ರಿಂದಾಗಿ ಬದುಕುಳಿಯುತ್ತಾರಾ ನಿಮಿಷಪ್ರಿಯಾ?

ಕೊಚ್ಚಿ: ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿಸಲು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ನಿಮಿಷಾ ಪ್ರಿಯಾ  ಬದುಕುಳಿಯಲು ಪ್ರತಿ ನಿಮಿಷ ಕೂಡಾ  ಅಮೂಲ್ಯವಾಗಿದ್ದು, ದೇಶದಾದ್ಯಂತ ಆಕೆಗಾಗಿ ಜನರು ಪ್ರಾರ್ಥಿಸಲಾರಂಭಿಸಿದ್ದಾರೆ. ಆಕೆಯ ಮರಣದಂಡನೆಯನ್ನು ತಪ್ಪಿಸುವ ಪ್ರಯತ್ನದ ಕೊನೆ ಪ್ರಯತ್ನದ ಭಾಗವಾಗಿ ಯೆಮೆನ್‌ನಲ್ಲಿ ನಡೆಯುತ್ತಿರುವ ಚರ್ಚೆಗಳು ಇಂದು ಮುಂದುವರಿಯಲಿವೆ. ಕಳೆದ ದಿನ ನಡೆದ ನಡೆದಿದ್ದ ಚರ್ಚೆಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿರಲಿಲ್ಲ. ನಿಮಿಷಾ ಅವರನ್ನು ಕ್ಷಮಿಸುವಂತೆ ಹತ್ಯೆಗೀಡಾದ ಯೆಮೆನನ್‌ ಪ್ರಜೆಯ ಕುಟುಂಬಿಕರೊಂದಿಗೆ ಚರ್ಚೆ ನಡೆಸಲಾಗಿದೆ. ಕ್ಷಮಿಸುವುದಾ ಬೇಡಾ ಎಂಬ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹತ್ಯೆಗೀಡಾ ಯೆಮೆನ್‌ ಪ್ರಜೆಯ ಕುಟುಂಬಿಕರು ಹೇಳಿದ್ದಾರೆ.
nimisha priya
ನಿಮಿಷಾ ಪ್ರಿಯಾಳನ್ನು ಬದುಕುಳಿಸಲು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವದ ನಿಯೋಗ ಫೀಲ್ಡಿಗಿಳಿದಿದ್ದು, ಯೆಮೆನ್‌ ಪ್ರಜೆಯ ಕುಟುಂಬಿಕರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಆಕೆಯನ್ನು ಉಳಿಸುವಂತೆ ಯೆಮೆನ್‌ ವಿದ್ವಾಂಸರ ಜೊತೆ ಚರ್ಚೆ ನಡೆದಿದೆ. ಪ್ರಮುಖ ಯೆಮೆನ್ ವಿದ್ವಾಂಸ ಹಾಫಿಲ್ ಹಬೀಬ್ ಉಮರ್ ಅವರ ಪ್ರತಿನಿಧಿಗಳು, ಬುಡಕಟ್ಟು ಮುಖಂಡರು, ಹತ್ಯೆಗೀಡಾದ ಯೆಮೆನ್ ಪ್ರಜೆಯ ಕುಟುಂಬದ ಪ್ರತಿನಿಧಿಗಳು ಮತ್ತು ನ್ಯಾಯಾಂಗದ ಪ್ರಮುಖ ಸದಸ್ಯರು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
Kanthapuram A.P. Aboobacker Musliar
ಯೆಮೆನ್‌ನಲ್ಲಿರುವ ಸುನ್ನಿ ವಿದ್ವಾಂಸರು,  ಕುಟುಂಬವು ನಮ್ಮ ವಿಮೋಚನೆಯನ್ನು ಸ್ವೀಕರಿಸಿ ನಿಮಿಷಾ ಪ್ರಿಯಾ ಅವರನ್ನು ಕ್ಷಮಿಸಬೇಕೆಂದು ಒತ್ತಾಯಿಸಿದರು. ನಿಮಿಷ ಪ್ರಿಯಾ ಸೇವ್ ಆಕ್ಷನ್ ಕೌನ್ಸಿಲ್ ಪದಾಧಿಕಾರಿಗಳು ಕಾರಂತೂರು ಮರ್ಕಜ್ ತಲುಪಿ ಕಾಂತಪುರಂ ಅವರನ್ನು ಭೇಟಿ ಮಾಡಿದರು. ನಿಮಿಷ ಪ್ರಿಯಾ ಬಿಡುಗಡೆಗಾಗಿ ಕಾಂತಪುರಂ ಮಧ್ಯಪ್ರವೇಶಿಸಿದ ನಂತರ ಯೆಮೆನ್‌ನಲ್ಲಿ ಮಾತುಕತೆ ಆರಂಭವಾದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಕಾರ್ಯಕರ್ತರು ಕಾಂತಪುರಂಗೆ ಭೇಟಿ ನೀಡಿದರು.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ (ಕಡತ)
ಕ್ರಿಯಾ ಸಮಿತಿಯೊಂದಿಗೆ ಸಹಕರಿಸುತ್ತಿರುವ ತಮಿಳುನಾಡು ಮೂಲದ ಸ್ಯಾಮ್ಯುಯೆಲ್, ಯೆಮೆನ್‌ನಲ್ಲಿ ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದರು. ಯೆಮೆನ್‌ನಲ್ಲಿರುವ ನಿಮಿಷಾ ಅವರ ತಾಯಿ ಪ್ರೇಮಕುಮಾರಿ ಅವರು ಮರಣದಂಡನೆಯನ್ನು ಮುಂದೂಡುವಂತೆ ಕೋರಿ ಯೆಮೆನ್ ಪ್ರಾಸಿಕ್ಯೂಷನ್ ಮಹಾನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಹತ್ಯೆಗೀಡಾದ ಯೆಮೆನ್ ನಾಗರಿಕರ ಕುಟುಂಬದೊಂದಿಗೆ ಚರ್ಚೆಗಳು ನಡೆಯುತ್ತಿವೆ ಮತ್ತು ಅವರು ವಿಮೋಚನ ಮೊತ್ತ(ಬ್ಲಡ್‌ ಮನಿ) ಪಾವತಿಸಲು ಸಿದ್ಧರಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Habib Omar bin Hafiz (Yemeni Islamic scholar and teacher)
ಮರಣದಂಡನೆ ಶಿಕ್ಷೆ ಜಾರಿಗೆ ನಿಗದಿಪಡಿಸಿದ ದಿನಾಂಕಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ವಿವಿಧ ಹಂತಗಳಲ್ಲಿ ಪ್ರಯತ್ನಗಳು ತೀವ್ರವಾಗಿ ಮುಂದುವರೆದಿವೆ. ಈ ಮಧ್ಯೆ, ನಿಮಿಷ ಪ್ರಿಯಾ ಬಿಡುಗಡೆಗೆ ಗರಿಷ್ಠ ಪ್ರಯತ್ನಗಳನ್ನು ಮಾಡಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪಕ್ಕೆ ಮಿತಿ ಇದೆ.
ಮರಣದಂಡನೆಯನ್ನು ತಪ್ಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ. ಮರಣದಂಡನೆಯನ್ನು ತಕ್ಷಣ ಜಾರಿಗೊಳಿಸದಂತೆ ಕೋರಿ ಯೆಮೆನ್ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ. ಮರುದಿನ ಮರಣದಂಡನೆಯನ್ನು ಜಾರಿಗೊಳಿಸಬಾರದು ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ತುರ್ತು ಹಸ್ತಕ್ಷೇಪವನ್ನು ಕೋರಿ ಸೇವ್ ನಿಮಿಷಪ್ರಿಯ ಆಕ್ಷನ್ ಕೌನ್ಸಿಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೆ ಪರಿಗಣಿಸುವಂತೆ ಮುಂದೂಡಿತ್ತು.
ಯೆಮೆನ್ ಪ್ರಾಸಿಕ್ಯೂಷನ್ ಮಹಾನಿರ್ದೇಶಕರು ಜೈಲು ಅಧಿಕಾರಿಗಳಿಗೆ ಮರಣದಂಡನೆಗೆ ಆದೇಶ ಹೊರಡಿಸಿದ್ದರು. ನಿಮಿಷಪ್ರಿಯ ಅವರ ತಾಯಿ ಮತ್ತು ಇತರರು ಕ್ರಿಯಾ ಸಮಿತಿಯ ಅಡಿಯಲ್ಲಿ ನಿಮಿಷಪ್ರಿಯ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ತಿಂಗಳುಗಳಿಂದ ಪ್ರಯತ್ನಿಸುತ್ತಿದ್ದರು. ಆದಾಗ್ಯೂ, ಹತ್ಯೆಗೀಡಾದ ಯೆಮೆನ್ ಪ್ರಜೆಯ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ.
error: Content is protected !!