ಮಂಗಳೂರು: ಭಾರತೀಯ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (IRCTC) – ಭಾರತ ಸರ್ಕಾರದ ನವರತ್ನ ಸಂಸ್ಥೆಯು ದಕ್ಷಿಣ ವಲಯದ ಮಂಗಳೂರು ಕಚೇರಿಯಿಂದ ಯಾತ್ರಿಕರ ಅನುಕೂಲಕ್ಕಾಗಿ ಹಲವು ವಿಶಿಷ್ಟ ಪ್ರವಾಸ ಪ್ಯಾಕೇಜುಗಳನ್ನು ಪ್ರಕಟಿಸಿದೆ.

ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಸಂಸ್ಥೆಯ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ. ಈ ಪ್ಯಾಕೇಜುಗಳಲ್ಲಿ ಕಾಶಿ, ಪ್ರಯಾಗರಾಜ್, ಅಯೋಧ್ಯಾ ವಿಮಾನ ಪ್ಯಾಕೇಜ್, ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್, ಮತ್ತು ದಕ್ಷಿಣ ಭಾರತ ದೇವಾಲಯ ಪ್ಯಾಕೇಜ್ ಸೇರಿದಂತೆ ತೀರ್ಥಯಾತ್ರೆ ಹಾಗೂ ಪ್ರವಾಸಿಗರಿಗೆ ಅನುಕೂಲಕರ ಯೋಜನೆಗಳು ಸೇರಿವೆ ಎಂದರು.
IRCTC ಪ್ರಕಟಣೆಯ ಪ್ರಕಾರ, ಕಾಶಿ/ಪ್ರಯಾಗರಾಜ್/ಅಯೋಧ್ಯಾ ವಿಮಾನ ಪ್ಯಾಕೇಜ್ — 5 ದಿನ/4 ರಾತ್ರಿ ಅವಧಿಯ ಪ್ರವಾಸವಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದೆ. ಪ್ರತಿ ಪ್ರಯಾಣಿಕನಿಗೂ ರೂ. 35,600/- ರಿಂದ ಶುಲ್ಕ ನಿಗದಿಯಾಗಿದೆ.
ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್ — ವಾರಾಣಸಿ, ಗಯಾ, ಪ್ರಯಾಗರಾಜ್, ಅಯೋಧ್ಯಾ, ಹರ್ಷಿದ್ವಾರ, ಮಥುರಾ, ಆಗ್ರಾ ಮುಂತಾದ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. AC ವರ್ಗದ ಪ್ರಯಾಣಿಕರಿಗೆ ರೂ. 11,430/-, ಸ್ಲೀಪರ್ ವರ್ಗದ ಪ್ರಯಾಣಿಕರಿಗೆ ರೂ. 10,160/- ರಿಂದ ಶುಲ್ಕ ನಿಗದಿಯಾಗಿದೆ.
ಈ ಎಲ್ಲಾ ಪ್ಯಾಕೇಜುಗಳಲ್ಲಿ ಪ್ರಯಾಣ, ವಸತಿ, ಆಹಾರ ಮತ್ತು ಸ್ಥಳೀಯ ಸಂಚಾರ ಸೌಲಭ್ಯಗಳನ್ನು ಒಳಗೊಂಡಿದೆ. ಯಾತ್ರಿಕರಿಗೆ ಸುರಕ್ಷಿತ ಹಾಗೂ ಆರ್ಥಿಕ ಪ್ರಯಾಣದ ಅನುಭವ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಪ್ಯಾಕೇಜುಗಳ ಕುರಿತು ಹೆಚ್ಚಿನ ಮಾಹಿತಿಗೆ ಅಥವಾ ಬುಕ್ಕಿಂಗ್ಗಾಗಿ IRCTC ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು.
📞 ದೂರವಾಣಿ ಸಂಖ್ಯೆ: 0824-2001936 / 8287932043
📧 ಇಮೇಲ್: tiftcmaq@irctc.com
🌐 ವೆಬ್ಸೈಟ್: www.irctctourism.com

