ಕುಂದಾಪುರ: ಬೀಚ್ಗೆ ವಿಹಾರಕ್ಕೆ ತೆರಳಿದ್ದ ಮೂವರು ಸ್ನೇಹಿತರು ನೀರುಪಾಲಾದ ಘಟನೆ ಇಲ್ಲಿನ ಕಿರಿಮಂಜೇಶ್ವರದ ಹೊಸ ಸಸಿಹಿತ್ಲು ಎಂಬಲ್ಲಿ ಮಂಗಳವಾರ(ಅ.14) ನಡೆದಿದೆ.
ಸಂಕೇತ್ (16), ಸೂರಜ್ (15), ಆಶೀಶ್ (14) ನೀರುಪಾಲಾದ ಬಾಲಕರು.
ಯುವಕರ ಮೃತದೇಹ ಪತ್ತೆಯಾಗಿದೆ. ಈಜಲು ನಾಲ್ವರು ಬಾಲಕರು ತೆರಳಿದ್ದು ಅವರಲ್ಲಿ ಓರ್ವ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.