ಕಾರ್ಕಳದಲ್ಲಿ ಪತ್ನಿಯ ಮೇಲೆ ಹ*ಲ್ಲೆಗೈದು ನೇಣಿಗೆ ಶರಣಾದ ಪತಿ

ಕಾರ್ಕಳ: ಹಿರ್ಗಾನ ಚಿಕ್ಕಲೆಟ್ಟು ನಡಿಮತ್ತಾವು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಪರಸ್ಪರ ಜಗಳವಾಡಿ ಪತಿ, ಪತ್ನಿಯ ಮೇಲೆ ಹಲ್ಲೆಗೈದ ಘಟನೆ ಜು. 15ರಂದು ನಡೆದಿದೆ. ಅನಂತರ ಪತಿ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೋಪಾಲಕೃಷ್ಣ (60) ಅವರು ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಮಧ್ಯಾಹ್ನದ ಹೊತ್ತಿಗೆ ಪತ್ನಿ ಸುರೇಖಾ ಅವರೊಂದಿಗೆ ಜಗಳವಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಸುರೇಖಾ ಅವರ ದೇಹದಿಂದ ರಕ್ತ ಬರುವುದು ನೋಡಿ ಹೆದರಿದ ಗೋಪಾಲಕೃಷ್ಣ ತನ್ನ ಮನೆಯ ತೋಟದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!