ರಾಜೇಶ್ವರಿ ಕುಡುಪು ರಚಿಸಿದ ಕಲಾ ಸಂಪದ ಪುಸ್ತಕ ಬಿಡುಗಡೆ: ಪುಸ್ತಕದ ವಿಶೇಷತೆ ಏನು?

ಮಂಗಳೂರು: ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ 32 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ರಾಜೇಶ್ವರಿ ಕುಡುಪು ಎಂಟನೇ ತರಗತಿ ಹಾಗೂ ಒಂಬತ್ತನೆಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮಾರ್ಗದರ್ಶಿ ‘ಕಲಾ ಸಂಪದ’ ಪುಸ್ತಕವನ್ನು ರಚಿಸಿದ್ದಾರೆ. ಈ ಕಲಾಸಂಪದ ಪುಸ್ತಕವು ಶಿಕ್ಷಣ ಇಲಾಖೆಯಿಂದ ಹಿಡಿದು ರಾಜ್ಯಮಟ್ಟದವರೆಗೂ ಎಲ್ಲದಿಂದಲೂ ಮೆಚ್ಚುಗೆ ಪಡೆದಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಈಗಾಗಲೇ ಮಂಗಳೂರು ಉತ್ತರ ವಲಯ ಚಿತ್ರಕಲಾ ಸಂಘದ ಅಧ್ಯಕ್ಷರಾಗಿ, ಡಯಟು ಮಂಗಳೂರಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಅಧೀಕ್ಷಕರಾಗಿ, ದಾವಣಗೆರ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನ ಕೇಂದ್ರದಲ್ಲಿ ಡಿಸಿಯಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.
ಮಾರ್ಗದರ್ಶಿ ಪುಸ್ತಕದಿಂದ ಮಕ್ಕಳು ಪಡೆದ ಪುಯೋಜನದಿಂದ ಇನ್ನನ್ನು ಪ್ರೇರಿತರಾಗಿ ಇದಿಗ ಅವರು ರಚನಾ ಕೌಶಲ್ಯ ಕ್ರಿಯಾಶೀಲತೆ ಮತ್ತು ಸೈಜನಶೀಲತೆ ಇಂತಹ ಕಲೆಯನ್ನು ಇನ್ನು ಹೆಚ್ಚು ವಿದ್ಯಾರ್ಥಿಗಳನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಇವರು ಎಂಟನೇಯ ತರಗತಿ ವಿದ್ಯಾರ್ಥಿಗಳಿಗಾಗಿ ಕಲಾಸಂಪದ ಎನ್ನುವ ಪುಸ್ತಕವನ್ನು ರಚನೆ ಮಾಡಿ ಎರಡನೆಯ ಅವೃತ್ತಿಯನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದೊಂದಿಗೆ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ ಎಂದರು.

ಈ ಕಲಾಸಂಪದ ಪುಸ್ತಕವು ಎಂಟನೇಯ ತರಗತಿಯ ಮಕ್ಕಳಿಗೆ ಮಾರ್ಗದರ್ಶನವಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಗಲಿ ಎಂಬುದು ಅವರ ಆಶಯ. ಗ್ರೇಡ್ ಪರೀಕ್ಷೆಗೆ ಹಾಜರಿರುವ ಮಕ್ಕಳಿಗೂ ಕೂಡ ಉಪಯುಕ್ತವಾಗಿದೆ. ಶಿಕ್ಷಣ ಇಲಾಖೆಯ ಚಿತ್ರಕಲಾ ಶಿಕ್ಷಕರ ಕೈಪಿಡಿ ಚಿತ್ರಕಲಾ ಸಿಂಚನ ಇವೆಲ್ಲದರ ಮಾರ್ಗದರ್ಶನದಲ್ಲಿ ಹಾಗೂ ಅದೇ ಮಾದರಿಯಲ್ಲಿ ಈ ಪುಸ್ತಕವನ್ನು ರಚನೆ ಮಾಡಿದ್ದಾರೆ.
ಈ ಕಲಾಸಂಪದ ವುಸ್ತಕ ರಚನೆಗಾಗಿ ಅವರ ಪತಿ ಕೆ. ರಮಾನಂದ ರಾವ್ ಹಾಗೂ ಕೆನರಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅರುಣಕುಮಾರಿಯವರ ಪ್ರೋತ್ಸಾಹವಿದೆ. ಈ ಪುಸ್ತಕ ರಚನೆಯಲ್ಲಿ ರಾಜೇಶ್ವರಿ ಕೆ. ಅವರ ಸಹೋದರ ವಸಂತ ಕದಿಗೆ ಅವರ ಪಾತ್ರ ಹಿರಿದಾದುದು. ಪ್ರೋತ್ಸಾಹ ಮತ್ತು ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ಮಾರ್ಗದರ್ಶಿ ಪುಸ್ತಕವನ್ನು ಇಂಗ್ಲಿಷ್ ನಲ್ಲಿ ಬರೆಯಲು ಸಹಕರಿಸಿದ ಶೀತಲ್ ಶೆಣೈ ಪ್ರಾಥಮಿಕ ಶಾಲಾ ಶಿಕ್ಷಕಿ ಇವರಿಗೆ ಅಭಿನಂದನೆಗಳು ಎಂದರು.

ರಾಜೇಶ್ವರಿ ಕೆ. ಕೆನರಾ ಹೈಸ್ಕೂಲ್ ಚಿತ್ರಕಲಾ ಶಿಕ್ಷಕಿ. ಕಲೆಯ ಮೂಲಕ ತನ್ನ ಶಾಲೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇತರ ಶಾಲೆಗಳ ಗೋಡೆ ಮತ್ತು ಆವರಣದ ಅಂದವನ್ನು ಹೆಚ್ಚಿಸುವಲ್ಲಿಯೂ ಶ್ರಮಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತಗಟ್ಟಿ ಸೌಂದರೀಕರಣಕ್ಕೆ ಸಂಬಂಧಿಸಿದ ವಿವಿಧ ಶಾಲೆಗಳನ್ನು ಸೌಂದರೀಕರಣಗೊಳಿಸುವಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾರೆ. ಕಲಾಸಂಪದ ಪುಸ್ತಕದಿಂದ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಇನ್ನಷ್ಟು ಉತ್ಸಾಹ ಒಲವು ಆಸಕ್ತಿ ಮೂಡಲಿ ಹಾಗೂ ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು.

ರಾಜೇಶ್ವರಿ ಕೆ ಇವರು ಪಕ್ಷೇತರ ಚಟುವಟಿಕೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ನೀಡಿರುತ್ತಾರೆ. ಪ್ರತಿ ವರ್ಷ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಪೇಪರ್ ಕ್ರಾಸ, ಡಾಲ್ ಮೇಕಿಂಗ್, ಗ್ಯಾಸ್ ವೇಂಟ್ ಫ್ಯಾಬ್ರಿಕ್ ಪೇಯಿಂಟ್, ಮುಖವಾಡ ರಚನೆ, ಅವೆ ಮಣ್ಣಿನ ಕಲಾಕೃತಿ ಇತ್ಯಾದಿಗಳನ್ನು ಕಲಿಸಿರುತ್ತಾರೆ. ಪರಿಸರದ ಮೂಲಕ ಮಕ್ಕಳ ಜ್ಞಾನಾಭಿವೃದ್ಧಿಗೆ ಕಾರ್ಯಗಾರ / ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುಸ್ತಕ ರಚಿಸಿದ ರಾಜೇಶ್ವರಿ ಕೆ., ಕೆನರಾ ಹೈಸ್ಕೂಲ್ ಸಂಚಾಲಕರಾದ ಅಶ್ವಿನಿ ಕಾಮತ್, ಮುಖ್ಯ ಶಿಕ್ಷಕಿ ಆರುಣಾಕುಮಾರಿ ಸಿ., ಕನರಾ ಪ್ರೌಢಶಾಲೆ, ಡೊಂಗರಕೇರಿ ಮಂಗಳೂರು ಇಲ್ಲಿನ ಹಿರಿಯ ಕಲಾವಿದರಾದ ಪೆರ್ಮುದೆ ಮೋಹನ್ ಕುಮಾರ್, ವಸಂತ ಕೇದಿಗೆ ಹಾಗೂ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.

error: Content is protected !!