ನವದಹೆಲಿ: ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು, ನಿಮ್ಮ ಧರ್ಮ ಯಾವುದೆಂದು ಪ್ರಶ್ನಿಸಿ ಹೆಂಡತಿ, ಮಕ್ಕಳ ಎದುರೇ 26 ಮಂದಿ ಅಮಾಯಕ ಗಂಡಸರನ್ನು ಹತ್ಯೆ ನಡೆಸಿ ಅವರ ಪತ್ನಿಯರ ಸಿಂಧೂರವನ್ನೇ ಅಳಿಸಿ ಹಾಕಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ನಡೆಸಿ ಸುಮಾರು 80ಕ್ಕೂ ಹೆಚ್ಚು ಭಯೋತ್ಪಾದಕರನ್ನು ಏಕಕಾಲದಲ್ಲಿ ಹೊಡೆದುರುಳಿಸಿದೆ. ಈ ಆಪರೇಷನ್ನಲ್ಲಿ ಜೈಷ್ ಮೊಹಮ್ಮದ್ನ ಟಾಪ್ ಉಗ್ರ, ಮಸೂದ್ ಅಜರ್ ಸಹಿತ ಅವನ 14 ಮಂದಿಯ ಇಡೀ ಫ್ಯಾಮಿಲಿಯನ್ನೇ ಸುಟ್ಟು ಹಾಕಲಾಗಿದೆ.ಎಂದು ವರದಿಯಾಗಿದೆ.
ಈ ಇಬ್ಬರು ಅಧಿಕಾರಿಗಳನ್ನು ಮುಂದಿಟ್ಟ ಸರ್ಕಾರದ ನಿರ್ಧಾರವು, ಮಹಿಳೆಯರು ಈಗ ಉನ್ನತ ಮಟ್ಟದಲ್ಲಿ ಭದ್ರತೆ, ಕಾರ್ಯತಂತ್ರ ಮತ್ತು ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.
ಪಹಲ್ಗಾಂನಲ್ಲಿ ಗಂಡಂದಿರ ಶವದ ಮುಂದೆ ಮಹಿಳೆಯರು ಅಸಾಹಯಕರಾಗಿ ಗೋಳಾಡಿದ್ದರೋ ಇದೀಗ ಭಾರತ ನಾರಿಯರನ್ನೇ ಕಳಿಸಿ ಪಾಪಿಗಳಿಗೆ ನರಕ ತೋರಿಸಿ, ನಾರಿ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh) ಹಾಗೂ ಕರ್ನಲ್ ಸೋಫಿಯಾ ಖುರೇಷಿ (Colonel Sophia Qureshi) ನೇರವಾಗಿ ಪಾಕಿಸ್ತಾನಕ್ಕೆ ಹಾಕಿ ಭಯೋತ್ಪಾದಕರ ನೆಲೆಗೇ ಬೆಂಕಿ ಹಾಕಿ ಬಂದಿದ್ದಾರೆ. ಈ ಪರಾಕ್ರಮವನ್ನು ಸ್ವತಃ ಮಹಿಳಾ ಸೇನಾಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ಸೇನೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh) ಹಾಗೂ ಕರ್ನಲ್ ಸೋಫಿಯಾ ಖುರೇಷಿ (Colonel Sophia Qureshi) ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಂ ಮೆಸ್ತ್ರಿ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಸಿಂಧೂರನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿ ನಡೆದಿರುವ ಬಗ್ಗೆ ಮಹಿಳಾ ಸೇನಾಧಿಕಾರಿಗಳು ಮಾಹಿತಿ ನೀಡಿದರು.
ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ನ ಒಂಬತ್ತು ಭಯೋತ್ಪಾದಕ ಶಿಬಿರಗಳು ವೈಮಾನಿಕ ದಾಳಿಯಲ್ಲಿ ನಾಶವಾದವು. ಪಾಕಿಸ್ತಾನದ ಸಿಯಾಲ್ಕೋಟ್ನ ಸರ್ಜಲ್ ಶಿಬಿರ, ಮೆಹ್ಮೂನಾ ಜೋಯಾ ಮತ್ತು ಮರ್ಕಜ್ ತೈಬಾ, ಮುರಿಡ್ಕೆ ಮತ್ತು ಬಹಾವಲ್ಪುರದ ಮರ್ಕಜ್ ಸುಭಾನಲ್ಲಾ ನಾಶವಾಗಿದೆ. ಅದೇ ರೀತಿ ಪಿಒಕೆಯಲ್ಲಿ, ಮುಜಾಫರಾಬಾದ್ನಲ್ಲಿ ಸವಾಯಿ ನಲಾ ಮತ್ತು ಸೈಯದ್ನಾ ಬಿಲಾಲ್, ಕೋಟ್ಲಿಯಲ್ಲಿ ಗುಲ್ಪುರ್ ಮತ್ತು ಅಬ್ಬಾಸ್ ಶಿಬಿರಗಳು ಮತ್ತು ಭಿಂಬರ್ನಲ್ಲಿ ಬರ್ನಾಲಾ ಶಿಬಿರಗಳು ಸರ್ವನಾಶವಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಒಸಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪಿಒಕೆಯಲ್ಲಿರುವ ಮುಜಫರಾಬಾದ್ನಲ್ಲಿರುವ ಸವಾಯಿ ನಾಲಾ ಶಿಬಿರವು ಲಷ್ಕರ್-ಎ-ತೈಬಾದ ಪ್ರಮುಖ ತರಬೇತಿ ಕೇಂದ್ರವಾಗಿತ್ತು. ಇಲ್ಲಿ ತರಬೇತಿ ಪಡೆದ ಭಯೋತ್ಪಾದಕರು ಕಳೆದ ವರ್ಷ ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್ನಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು ಮತ್ತು ಪಹಲ್ಗಾಮ್ ದಾಳಿಯನ್ನೂ ಮಾಡಿದ್ದರು. ಮುಜಫರಾಬಾದ್ನಲ್ಲಿರುವ ಸೈಯದ್ನಾ ಬೆಲಾಲ್ ಶಿಬಿರವನ್ನು ಜೈಶ್-ಎ-ಮೊಹಮ್ಮದ್ ಎಲ್ಒಸಿಯಾದ್ಯಂತ ದಾಳಿ ನಡೆಸಲು ವೇದಿಕೆಯಾಗಿ ಬಳಸಿಕೊಂಡಿತು. ಇಲ್ಲಿ, ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳಲ್ಲಿ ಮತ್ತು ಕಾಡಿನಲ್ಲಿ ಬದುಕುಳಿಯುವ ಕುರಿತು ತರಬೇತಿ ನೀಡಲಾಯಿತು.
ಎಲ್ಒಸಿಯಿಂದ 30 ಕಿ.ಮೀ ದೂರದಲ್ಲಿರುವ ಕೋಟ್ಲಿಯಲ್ಲಿರುವ ಗುಲ್ಪುರ್ ಶಿಬಿರವು ಲಷ್ಕರ್-ಎ-ತೈಬಾದ ಮೂಲ ಶಿಬಿರವಾಗಿತ್ತು. ಇಲ್ಲಿ ತರಬೇತಿ ಪಡೆದ ಭಯೋತ್ಪಾದಕರು ರಾಜೌರಿ-ಪೂಂಚ್ನಲ್ಲಿ ಕಾರ್ಯಾಚರಣೆ ನಡೆಸಿದರು ಮತ್ತು 2023 ರಲ್ಲಿ ಪೂಂಚ್ನಲ್ಲಿ ಮತ್ತು ಕಳೆದ ವರ್ಷ ಯಾತ್ರಿಕರ ಬಸ್ನಲ್ಲಿ ದಾಳಿ ನಡೆಸಿದ್ದರು. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ-ಉರ್-ರೆಹಮಾನ್ ಲಖ್ವಿ ಈ ಶಿಬಿರಕ್ಕೆ ಆಗಾಗ್ಗೆ ಬೋಧನೆ ಉದ್ದೇಶಗಳಿಗಾಗಿ ಭೇಟಿ ನೀಡುತ್ತಿದ್ದರು ಎಂದು ವರದಿಯಾಗಿದೆ.
ಕೋಟ್ಲಿಯಲ್ಲಿರುವ ಅಬ್ಬಾಸ್ ಶಿಬಿರವು LOC ಯಿಂದ ಸುಮಾರು 13 ಕಿ.ಮೀ ದೂರದಲ್ಲಿದೆ ಮತ್ತು ಲಷ್ಕರ್ನ ಆತ್ಮಹತ್ಯಾ ಬಾಂಬರ್ಗಳಿಗೆ ತರಬೇತಿ ನೀಡುವ ಕೇಂದ್ರವೆಂದು ಕರೆಯಲ್ಪಡುತ್ತಿತ್ತು. ಈ ಶಿಬಿರವು ಸುಮಾರು 50 ಭಯೋತ್ಪಾದಕರಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿತ್ತು. ಭಿಂಬರ್ನಲ್ಲಿರುವ ಬರ್ನಾಲಾ ಶಿಬಿರವು LOC ಯಿಂದ 9 ಕಿ.ಮೀ ದೂರದಲ್ಲಿದೆ ಮತ್ತು ಭಯೋತ್ಪಾದಕ ನೇಮಕಾತಿದಾರರಿಗೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ತರಬೇತಿ ನೀಡಲು ಬಳಸಲಾಗುತ್ತಿತ್ತು. ಅವರಿಗೆ ಕಾಡಿನಲ್ಲಿ ಬದುಕುಳಿಯುವ ತಂತ್ರಗಳನ್ನು ಸಹ ಕಲಿಸಲಾಗುತ್ತಿತ್ತು. ಸಿಯಾಲ್ಕೋಟ್ನಲ್ಲಿರುವ ಸರ್ಜಲ್ ಶಿಬಿರವು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಮಾರ್ಚ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ಪೊಲೀಸರನ್ನು ಹತ್ಯೆಗೈದ ದಾಳಿಯನ್ನು ಇಲ್ಲಿ ತರಬೇತಿ ಪಡೆದ ಭಯೋತ್ಪಾದಕರು ನಡೆಸಿದ್ದರು.
ಸಿಯಾಲ್ಕೋಟ್ ಬಳಿಯ ಮೆಹಮೂನಾ ಜೋಯಾ ಶಿಬಿರವು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಇದು ಹಿಜ್ಬುಲ್ ಮುಜಾಹಿದ್ದೀನ್ನ ತರಬೇತಿ ಕೇಂದ್ರವಾಗಿತ್ತು ಮತ್ತು ಕಥುವಾ-ಜಮ್ಮು ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಸಹ ಬಳಸಲಾಗುತ್ತಿತ್ತು. ಪಠಾಣ್ಕೋಟ್ ವಾಯುನೆಲೆಯ ಮೇಲೆ 2016 ರಲ್ಲಿ ನಡೆದ ದಾಳಿಯನ್ನು ಈ ಶಿಬಿರದಿಂದಲೇ ನಡೆಸಲಾಯಿತು.
ಗಡಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ ಶಿಬಿರವು ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಯಾಗಿತ್ತು. ಮುಂಬೈ ದಾಳಿಯ ಸಮಯದಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಭಯೋತ್ಪಾದಕ ಅಜ್ಮಲ್ ಕಸಬ್, ಇಲ್ಲಿ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದ. ಡೇವಿಡ್ ಹೆಡ್ಲಿ ಕೂಡ ಇಲ್ಲಿ ತರಬೇತಿ ಪಡೆದಿರುವುದಾಗಿ ವರದಿಯಾಗಿದೆ.
ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮರ್ಕಜ್ ಸುಭಾನ್ ಶಿಬಿರವು ಜೈಶ್-ಎ-ಮೊಹಮ್ಮದ್ನ ಪ್ರಧಾನ ಕಚೇರಿಯಾಗಿತ್ತು. ಇದನ್ನು ನೇಮಕಾತಿ, ತರಬೇತಿ ಮತ್ತು ಸಂಭಾವ್ಯ ನೇಮಕಾತಿಗಳ ಬೋಧನೆಗಾಗಿ ಬಳಸಲಾಗುತ್ತಿತ್ತು. ಮಸೂದ್ ಅಜರ್ನಂತಹ ಭಯೋತ್ಪಾದಕ ಕಮಾಂಡರ್ಗಳು ಈ ಶಿಬಿರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.
ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಸಿಡಿತಲೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಮೂಲಕ ಸ್ಥಾಪಿತ ತಂತ್ರಜ್ಞಾನ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ನಿಖರವಾದ ದಾಳಿಗಳನ್ನು ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದರು, ಪ್ರತಿಯೊಂದು ದಾಳಿಯಲ್ಲೂ ಪರಿಣಾಮ ಬೀರುವ ಸ್ಥಳವು ನಿರ್ದಿಷ್ಟ ಕಟ್ಟಡ ಅಥವಾ ಕಟ್ಟಡಗಳ ಗುಂಪಾಗಿತ್ತು. ಯಾವುದೇ ಮಿಲಿಟರಿ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿಲ್ಲ, ಮತ್ತು ಯಾವುದೇ ಹಾನಿಯ ವರದಿಯಾಗಿಲ್ಲ ಎಂದು ಅವರು ಹೇಳಿದರು.
ಸೋಫಿಯಾ ಖುರೇಷಿ ಯಾರು?
ಸೋಫಿಯಾ ಖುರೇಷಿ ಮೂಲತಃ ಗುಜರಾತ್ನವರು. ಇವರು 1981ರಲ್ಲಿ ಗುಜರಾತ್ನ ವಡೋದರಾದಲ್ಲಿ ಜನಿಸಿದ್ದರು. ಇವರು ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಫಿಯಾ ಅಜ್ಜ ಕೂಡ ಭಾರತೀಯ ಸೇನೆಯಲ್ಲಿದ್ದರು. ಅವರ ತಂದೆ ಕೂಡ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿ ಗಮನ ಸೆಳೆದಿದ್ದರು. ನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಸೋಫಿಯಾ ಖುರೇಷಿ 1999ರಲ್ಲಿ ಭಾರತೀಯ ಸೇನೆಗೆ ಸೇರಿದರು.
ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ನಂತರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸೋಫಿಯಾ ನೇಮಕಗೊಂಡರು. ಸೋಫಿಯಾ 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 2010ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ್ದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಪ್ರಶಂಸಾ ಪತ್ರವನ್ನು ಸಹ ಪಡೆದಿದ್ದಾರೆ. ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.
ವಿಂಗ್ ಕಮಾಂಡರ್ ವ್ಯೋಮಿಕಾ ಯಾರು?
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅನೇಕ ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2004ರಲ್ಲಿ ಐಎಎಫ್ಗೆ ನೇಮಕಗೊಂಡ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್ಗಳನ್ನು ಹಾರಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. 2017ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಅವರು, IAFನಲ್ಲಿ ಮಹಿಳೆಯರಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೇ ವ್ಯೋಮಿಕಾ ಅವರ ಬಾಲ್ಯದ ಕನಸು ಕೂಡ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದರು