ಬಂಟ್ವಾಳ : ಮಹಲ್ ಸಬಲೀಕರಣ ಸಮಿತಿ ತಾಳಿಪಡ್ಪು ಬಿ. ಸಿ. ರೋಡ್ ಇದರ ವತಿಯಿಂದ ಉಸ್ತಾದುಲ್ ಅಸಾತೀನ್ ಶೈಖುನಾ ಮಿತ್ತಬೈಲ್ ಉಸ್ತಾದರ ಅನುಸ್ಮರಣಾ ಮಹಾ ಸಂಗಮ ತಾಳಿಪಡ್ಪು ಜುಮಾ ಮಸೀದಿ ವಠಾರ ದಲ್ಲಿ ನಡೆಯಲಿದೆ.

ಮಸ್ಜಿದುಲ್ ಹುದಾ ಜುಮಾ ಮಸೀದಿ ತಾಳಿಪಡ್ಪು,ಮಹಲ್ ಸಬಲೀಕರಣ ಸಮಿತಿ ತಾಳಿಪಡ್ಪು ಇದರ ಅಧ್ಯಕ್ಷರಾದ ಪಿ. ಕೆ. ಅಬ್ದುಲ್ ಅಝೀಝ್ ರವರ ಅಧ್ಯಕ್ಷತೆಯಲ್ಲಿ. ಏಪ್ರಿಲ್ 11ಹಾಗೂ 12 ರಂದು ನಡೆಯಲಿದೆ.

ಇದರ ಪ್ರಯುಕ್ತ ಪ್ರಸಿದ್ದ ವಾಗ್ಮಿ ಗಳಾದ ಹಾಫಿಲ್ ಕುಮ್ಮನo ನಿಝಮುದ್ದೀನ್ ಅಲ್ ಅಝ್ ಹರಿ ಯವರು ಏಪ್ರಿಲ್ 11 ಶನಿವಾರ ಹಾಗೂ ಶಮೀರ್ ದಾರಿಮಿ ಕೊಲ್ಲo 12 ಭಾನುವಾರ ದಂದು ಮತ ಪ್ರವಚನ ನಡೆಯಲಿದೆ.

ಕಾರ್ಯಕ್ರಮ ಸೈಯದುಲ್ ಉಲಮ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಗಳ್ (ಖಾಝಿ ಮಿತ್ತಬೈಲ್, ಅಧ್ಯಕ್ಷರು ಸಮಸ್ತ ಕೇರಳ ಜoಇಯ್ಯತುಲ್ ಉಲಮಾ) ಉದ್ಘಾಟಿಸಲಿದ್ದಾರೆ. ಅಲ್ಲದೆ ಸ್ಥಳೀಯ ಉಲೇಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
