
ಬೆಳ್ತಂಗಡಿ : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದೆ.


ಕಾರಿನಲ್ಲಿ ಇರಳಪ್ಪ, ಅವರ ಪತ್ನಿ ಕವಿತಾ, ಪುತ್ರ ಗಣೇಶ, ಪುತ್ರಿ ಇರಣ್ಯ ಪ್ರಯಾಣಿಸುತ್ತಿದ್ದರು. ಕವಿತಾ ಅವರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
