ಭೀಕರ ಅಪಘಾತಕ್ಕೆ ಉಸ್ತಾದಿ, ಎರಡು ವರ್ಷದ ಪುತ್ರ ಬಲಿ; ಪುಟಾಣಿ ಮಗಳು ಗಂಭೀರ

ಹುಬ್ಬಳ್ಳಿ: ಹುಬ್ಬಳ್ಳಿ-ಕಾರವಾರ ರಸ್ತೆಯ ಅಂಚಟಗೇರಿ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ತಂದೆ ಹಾಗೂ ಎರಡು ವರ್ಷದ ಮಗು ಮೃತಪಟ್ಟಿದ್ದು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು(ಡಿ.31) ಬೆಳಗ್ಗೆ ನಡೆದಿದೆ.

ತಡಸದ ನಿವಾಸಿ ಮೆಹಬೂಬ್​ ಖಾನ್ ಉಸ್ತಾದಿ (36), ಅಸ್ನೇನ್ (2) ಮೃತ ತಂದೆ-ಮಗ, ಅಜೀಜಾ(4) ಗಂಭೀರವಾಗಿ ಗಾಯಗೊಂಡಿರುವ ಹೆಣ್ಣುಮಗಳು.

ಹುಬ್ಬಳ್ಳಿಯಿಂದ ತಡಸಕ್ಕೆ ಹೋಗುವಾಗ ಮೆಹಬೂಬ್​ ಅವರು ಓವರ್​ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬಸ್​ಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಬಾಲಕಿ ಅಜೀಜಾಳನ್ನು ಚಿಕಿತ್ಸೆಗಾಗಿ ನಗರದ ಕೆಎಂಸಿಆಎರ್​ಐ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!