GOOD NEWS!!! ಶಬರಿಮಲೆ ಯಾತ್ರಿಕರಿಗೆ ‘ಪಂಪಾ ತೀರ್ಥಂ’!

ಶಬರಿಮಲೆ: ಈ ವರ್ಷದ ಯಾತ್ರಾ ಸೀಸನ್‌ನಲ್ಲಿ ಯಾತ್ರಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲು ಜಲ ಪ್ರಾಧಿಕಾರ ಮತ್ತು ದೇವಸ್ವಂ ಮಂಡಳಿಯು ವಿಸ್ತೃತ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಪಂಪಾ–ಸನ್ನಿಧಾನಂ ಮಾರ್ಗ ಹಾಗೂ ನೀಲಕ್ಕಲ್ ಸೇರಿ ಒಟ್ಟು 193 ನೀರು ವಿತರಣೆ ಕಿಯೋಸ್ಕ್‌ಗಳು ಕಾರ್ಯಪ್ರವೃತ್ತಗೊಂಡಿವೆ. ಪಂಪಾದಿಂದ ಸನ್ನಿಧಾನಂ ಮಾರ್ಗದಲ್ಲಿ 105 ಕಿಯೋಸ್ಕ್‌ಗಳು, ನೀಲಕ್ಕಲ್‌ನಲ್ಲಿ 88 ಕಿಯೋಸ್ಕ್‌ಗಳು ಯಾತ್ರಿಕರಿಗೆ ಶುದ್ಧೀಕರಿಸಿದ ‘ಪಂಪ ತೀರ್ಥಂ’ ನೀರನ್ನು ಒದಗಿಸುತ್ತಿವೆ.

ശബരിമല സന്നിധാനത്ത് ദർശനം കാത്തു നി‍ൽക്കുന്ന തീർഥാടകരുടെ തിരക്ക്

ನೀರನ್ನು ರಿವರ್ಸ್ ಓಸ್ಮೋಸಿಸ್ (RO) ವಿಧಾನದಿಂದ ಶುದ್ಧೀಕರಿಸಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಪಂಪಾದಲ್ಲಿ ಗಂಟೆಗೆ 35,000 ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ ಸ್ಥಾವರವನ್ನು ಸ್ಥಾಪಿಸಲಾಗಿದೆ. ತ್ರಿವೇಣಿಯಿಂದ ನೀರನ್ನು ಪಂಪ್ ಮಾಡಿ ಪಂಪಾ, ನೀಲಿಮಲ ಅಡಿವರಂ, ನೀಲಿಮಲ ಮೇಲ್ಭಾಗ, ಅಪ್ಪಾಚಿಮೇಡು ಮತ್ತು ಸಾರಮ್‌ಕುತಿ ಪ್ರದೇಶಗಳಲ್ಲಿರುವ ಟ್ಯಾಂಕ್‌ಗಳಿಗೆ ವಿತರಿಸಲಾಗುತ್ತಿದೆ.

ಪಂಪಾದಲ್ಲಿ ಕ್ರಮವಾಗಿ 2.8 ಲಕ್ಷ ಲೀಟರ್, 2 ಲಕ್ಷ ಲೀಟರ್ ಮತ್ತು 1.35 ಲಕ್ಷ ಲೀಟರ್ ಸಾಮರ್ಥ್ಯದ ಮೂರು ಟ್ಯಾಂಕ್‌ಗಳಿದ್ದು, ನೀಲಿಮಲ ಅಡಿವರಂ, ಮುಖಲ್ ಮತ್ತು ಅಪ್ಪಾಚಿಮೇಡುಗಳಲ್ಲಿ ತಲಾ 2 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳಿವೆ. ಸಾರಮ್‌ಕುತಿಯ ಟ್ಯಾಂಕ್ 6 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ನಿರಂತರ ಸರಬರಾಜಿಗಾಗಿ ಶಬರಿಮಲೆಯಲ್ಲಿ ಈ ಸಲ 80 ತಾತ್ಕಾಲಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸರಬರಾಜು ಮಾಡಲಾದ ನೀರಿನ ಗುಣಮಟ್ಟವನ್ನು ಖಚಿತಪಡಿಸಲು ಜಲ ಪ್ರಾಧಿಕಾರವು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತದೆ. ಪಂಪಾದಲ್ಲಿ ಸ್ಥಾಪಿಸಲಾದ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ಪೂರ್ಣಗೊಂಡ ನಂತರವೇ ಕಿಯೋಸ್ಕ್‌ಗಳಿಗೆ ನೀರು ವಿತರಿಸಲಾಗುತ್ತದೆ.

ನೀಲಕ್ಕಲ್‌ನಲ್ಲಿ ಈ ಸಲ ಹೊಸ ನೀರು ಸರಬರಾಜು ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಿಂದಾಗಿ ನೀಲಕ್ಕಲ್ ಈಗ ಪಂಪಾವನ್ನು ಅವಲಂಬಿಸದೇ, ಕಕ್ಕಾಟ್‌ನಿಂದ ನೇರವಾಗಿ ನೀರನ್ನು ಪಡೆಯಲಿದೆ. ಹಿಂದೆ ಪಂಪಾದಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.

ಕಕ್ಕಾಟ್‌ನ ಅಂಗಮೂಝಿಯಿಂದ ಪಂಪ್ ಮಾಡಿದ ನೀರನ್ನು ಶುದ್ಧೀಕರಿಸಿ ನೀಲಕ್ಕಲ್‌ಗೆ ವಿತರಿಸಲಾಗುತ್ತಿದ್ದು, ಇದಕ್ಕಾಗಿ 13 MLD ಸಾಮರ್ಥ್ಯದ ಶುದ್ಧೀಕರಣ ಘಟಕ (ಗಂಟೆಗೆ 27,000 ಲೀಟರ್) ಸ್ಥಾಪಿಸಲಾಗಿದೆ. ನೀಲಕ್ಕಲ್‌ನಲ್ಲಿರುವ 88 ಕಿಯೋಸ್ಕ್‌ಗಳು ದಿನವಿಡೀ ಕುಡಿಯುವ ನೀರನ್ನು ವಿತರಿಸುತ್ತವೆ. ತುರ್ತು ಸಂದರ್ಭಗಳಲ್ಲಷ್ಟೇ ಟ್ಯಾಂಕರ್‌ಗಳನ್ನು ಬಳಸುವ ವ್ಯವಸ್ಥೆ ಇದೆ.

ಸನ್ನಿಧಾನಂ, ಪಂಡಿತಾವಲಂ ಮತ್ತು ಮಲಿಕಪ್ಪುರಂ ಪ್ರದೇಶಗಳಲ್ಲಿ ಕುಡಿಯುವ ನೀರು ವಿತರಣೆಯ ಜವಾಬ್ದಾರಿ ದೇವಸ್ವಂ ಮಂಡಳಿಗಿದೆ. ಪಂಡಿತಾವಲಂ ಬಳಿಯ ದೊಡ್ಡ ಟ್ಯಾಂಕ್ 40 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಸನ್ನಿಧಾನಂ ಪ್ರದೇಶದಲ್ಲಿ ದೇವಸ್ವಂ ಟ್ಯಾಂಕ್‌ಗಳಿಗೆ ಅಗತ್ಯವಾದ ನೀರನ್ನು ಕುನ್ನಾರ್ ಅಣೆಕಟ್ಟಿನಿಂದ ಸಂಗ್ರಹಿಸಲಾಗುತ್ತದೆ.

error: Content is protected !!