ಕುಂದಾಪುರ: Kgf ಸಹಿತ ಅನೇಕ ಸಿನಿಮಾಗಳ ಪ್ರತಿಭಾನ್ವಿತ ನಟ, ಸುಪ್ರಸಿದ್ಧ ಕಲಾನಿರ್ದೇಶಕ ಹಾಗೂ ಹೃದಯವಂತರಾದ ದಿನೇಶ್(52) ಮಂಗಳೂರು ಭಾನುವಾರ(ಆ.24) ಬೆಳಗಿನ ಜಾವ ಮೂರೂವರೆ ಗಂಟೆಗೆ ವಿಧಿವಶರಾದರು.
ದಿನೇಶ್ ಮಂಗಳೂರು ಅವರು ಕಳೆದ ಐದು ದಿನಗಳಿಂದ ಬ್ರೇನ್ ಹ್ಯಾಮರೇಜ್ನಿಂದ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಅವರ ಅಕಾಲಿಕ ನಿಧನದಿಂದ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಹಳೆಯ-ಹೊಸ ತಲೆಮಾರಿನ ಕಲಾವಿದರೊಂದಿಗೆ ಅವರು ಮಾಡಿದ ಕೆಲಸಗಳು ಸ್ಮರಣೀಯವಾಗಿವೆ. ವಿನಮ್ರ ವ್ಯಕ್ತಿತ್ವದ ಮೂಲಕ ಅವರು ಎಲ್ಲರ ಮನ ಗೆದ್ದಿದ್ದರು.