ಸುಹಾಸ್‌ ಶೆಟ್ಟಿ ಹತ್ಯೆ: ಬಜ್ಪೆ-ಸುರತ್ಕಲ್‌ ನಲ್ಲಿ ಹಲವು ಮನೆಗಳ ಮೇಲೆ ಎನ್‌ ಐಎ ದಾಳಿ!

ಸುರತ್ಕಲ್: ಇತ್ತೀಚೆಗೆ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಎನ್ ಐಎ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಬಜ್ಪೆ ಹಾಗೂ ಸುರತ್ಕಲ್‌ ಭಾಗದ 13ಕ್ಕೂ ಹೆಚ್ಚು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಮಾಹಿತಿ ಲಭಿಸಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಪೇಟೆ ನಿವಾಸಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಆದಿಲ್ ಎಂಬಾತನ ಮನೆ, ಕಳವಾರು ನಿವಾಸಿ ರಿಝ್ವಾನ್ ಮನೆ ಸೇರಿದಂತೆ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ‌ ನಿವಾಸಕ್ಕೆ ಎನ್‌ ಐಎ ಅಧಿಕಾರಿಗಳ ತಂಡ ದಾಳಿ ಮಾಡಿ ಮಾಹಿತಿ ಕಲೆಹಾಕುತ್ತಿದೆ. ಸುಹಾಸ್‌ ಶೆಟ್ಟಿ ಹತ್ಯೆಗೆ ಸಹಕಾರ ನೀಡಿದ್ದ ಆರೋಪದಲ್ಲಿ ಬಜ್ಪೆಯ ವಿವಿಧೆಡೆ ದಾಳಿ ನಡೆಸಿರುವ ಮಾಹಿತಿ ಲಭಿಸಿದೆ.

error: Content is protected !!