ಜೂ.21ರಂದು ಸಂಜೆ ಪುರಭವನದಲ್ಲಿ ಯಕ್ಷನಂದನದಿಂದ ವಾಲಿಮೋಕ್ಷ

ಮಂಗಳೂರು: ಇಡೀ ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಇಂಗ್ಲೀಷ್ ಭಾಷೆಯಲ್ಲಿ ಸತತ 8 ಗಂಟೆಗಳ ಕಾಲ ಪ್ರದರ್ಶಿಸಿದ ಖ್ಯಾತಿಯ ʻಯಕ್ಷನಂದನʼ ಪಿ.ವಿ. ಐತಾಳ ಇಂಗ್ಲೀಷ್ ಯಕ್ಷಗಾನ ಬಳಗದ ವತಿಯಿಂದ ಜೂನ್ 21ರ ಶನಿವಾರದಂದು ಪಿ.ವಿ ಐತಾಳರ ತಿಥಿಯ ಪ್ರಯುಕ್ತ ಸಂಜೆ 5.30ರಿಂದ 9.00ರ ವರೆಗೆ ಪಿವಿ ಐತಾಳರ ಇನ್ನೋರ್ವ ಪುತ್ರ ಪಿ. ಸುರೇಶ್ ಕುಮಾರ ಐತಾಳ ಬರೆದ ʻವಾಲಿ ಮೋಕ್ಷʼ ಪ್ರಸಂಗವು ಮಂಗಳೂರಿನ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಂಚಾಲಕ ಪಿ. ಸಂತೋಷ್ ಐತಾಳ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಅವರು, ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶೀರ್ವಚನವನ್ನು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು, ಎಡನೀರು ಮಠ, ಕಾಸರಗೋಡು ಇವರು ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು, ಅತಿಥಿಯಾಗಿ ಮಾಜಿ ಎಂಎಲ್‌ಸಿ ಗಣೇಶ್‌ ಕಾರ್ಣಿಕ್‌ ಭಾಗವಹಿಸಲಿರುವರು. ಅನೇಕ ಬಾಲ-ಬಾಲಿಕಾ ಕಲಾವಿದರೂ ಈ ಯಕ್ಷನಂದನ ಬಳಗದಲ್ಲಿ ಯಕ್ಷಗಾನವನ್ನು ಮುಂದಿನ ತಲೆಮಾರಿಗೂ ವರ್ಗಾಯಿಸುವ ಕಾರ್ಯವನ್ನು ಈ ತಂಡವು ಮಾಡಿದೆ ಎಂದು ತಂಡದ ಸಂಚಾಲಕ ಹೇಳಿದರು.

ಜೂ.21 ರಂದು ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ

ತನ್ನ ಇದಕ್ಕೆ ಸಹೋದರರಾದ ಡಾ| ಪಿ. ಸತ್ಯಮೂರ್ತಿ ಐತಾಳ, ಪಿ. ಸುರೇಶ ಕುಮಾರ ಐತಾಳ ಹಾಗೂ ಮನೆಯವರೆಲ್ಲರ ಸಂಪೂರ್ಣ ಸಹಕಾರವೂ ಇದೆ. ಅಲ್ಲದೇ, ನಮ್ಮ ಸಂಸ್ಥೆ 5ನೇ ವರ್ಷಕ್ಕೆ, 10ನೇ ವರ್ಷಕ್ಕೆ ಹಾಗೂ 25ನೇ ವರ್ಷಕ್ಕೆ ಸ್ಮರಣ ಸಂಚಿಕೆಗಳನ್ನು ಹೊರತಂದು ಈಗಾಗಲೇ ಮನೆ ಮಾತಾಗಿರುವ ಸಂಸ್ಥೆಯಾಗಿದೆ. ಕಡು ಬಡತನದ ಕೃಷಿಕಕುಟುಂಬದಲ್ಲಿ ಜನಿಸಿದ ಪಿ.ವಿ.ಐತಾಳರು, ಬಡತನದಲ್ಲಿಯೇ ಬೆಳದು ತನ್ನ ಶ್ರದ್ಧೆ ಹಾಗೂ ಪರಿಶ್ರಮದ ಮೂಲಕ, ಕಾನೂನು ಪದವಿಯನ್ನು ಪಡೆದು, ವೃತ್ತಿಯನ್ನು ಮುಂದುವರಿಸಿ ಸ್ವ ಸಾಮರ್ಥ್ಯದಿಂದ ಮನುಷ್ಯ ಎಷ್ಟು ಎತ್ತರಕ್ಕೆ ಬರಬಹುದು ಎಂಬುದಕ್ಕೆ ನಿದರ್ಶನರಾಗಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯಕರಾಗಿ ಎಂತು ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಟ್ಟಂತಹಾ ಪಿ.ವಿ. ಐತಾಳರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ಹುಟ್ಟು ಹಾಕಿದ ಪಿ.ವಿ.ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರೀಟೇಬಲ್ ಟ್ರಸ್ಟಿನ ವತಿಯಿಂದ ಕೊಡಲ್ಪಡುವ ವಿದ್ಯಾನಿಧಿಯನ್ನು ದ್ವಿತೀಯ ಪಿ.ಯು.ಸಿ ಯಲ್ಲಿ 5ನೇ ಬ್ಯಾಂಕ್ ಗಳಿಸಿರುವ ಅಲೋಸಿಯಸ್ ಪಿ.ಯು ಕಾಲೇಜಿನ ವಿದ್ಯಾರ್ಥಿ ಪ್ರದ್ಯುಮ್ನ, ಆರ್. ಉರಾಳ ಹಾಗೂ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ 6ನೇ ರ್ಯಾಂಕ್‌ ಗಳಿಸಿದ ಎಜೆ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಡಾ. ಶಿವಪ್ರಸಾದ್ ಕಾರಂತ, ಹಾಗೂ ಐ.ಐ. ಎಸ್. ಇ.ಆರ್ ಪುಣೆಯಲ್ಲಿ ಬಿ.ಎಸ್. ಎಂ.ಸ್. ಡಿಗ್ರಿ ಮುಗಿಸಿ ಪಿ.ಹೆಚ್‌ಡಿ. ಇನ್ ನ್ಯೂರೋ ಸೈನ್ಸ್‌ನಲ್ಲಿ ಬ್ರಾಂಡೀಸ್ ಯುನಿವರ್ಸಿಟಿ, ಬಪ್ಪನಾಡಿನ ವಾಸುದೇವ ಕೆ. ಭಟ್ ಇವರಿಗೆ ಪುರಸ್ಕಾರ ಮಾಡಲಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯಕ್ಷನಂದನ ಸಂಘದ ರವಿ ಅಲೆವೂರಾಯ ವರ್ಕಾಡಿ, ಡಾ. ಪಿ. ಸತ್ಯಮೂರ್ತಿ ಐತಾಳ, ಪಿ. ಸುರೇಶ್ ಕುಮಾರ್ ಐತಾಳ, ವೃಂದಾ ಕೊನ್ನಾರ್, ಶ್ರುತಕೀರ್ತಿರಾಜ, ಹಾಗೂ ಶರತ್ ಮುಂತಾದವರು ಭಾಗವಹಿಸಿದ್ದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!