ಮಂಗಳೂರು: ಜೂನ್ 21 ಮತ್ತು 22 ಮಂಗಳೂರಿನ ಬೆಂದೂರ್ವೆಲ್ನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಸೆಂಟಿನರಿ ಆಡಿಟೋರಿಯಂನಲ್ಲಿ (ಸೇಂಟ್ ಆಗ್ನೆಸ್ ಕಾಲೇಜಿನ ಸಮೀಪ) ಕುಡ್ಲ ವೆಲಕಾಯಿ ಪರ್ಬ(ಕುಡ್ಲ ಹಲಸು ಹಬ್ಬ) ಸ್ಥಳೀಯ ಉತ್ಪನ್ನಗಳು ಮತ್ತು ಸಂಸ್ಕೃತಿಯ ಆಚರಣೆ ನಡೆಯಲಿದೆ ಎಂದು ಅಶ್ವಿನ್ ಸಿಕ್ಕೇರಾ ಹೇಳಿದರು.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಹಿತಿ ನೀಡಿದ ಅವರು ,ಮಂಗಳೂರು ಹಲಸಿನ ಹಬ್ಬ ಕರಾವಳಿ ಜನರ ಸ್ಫೂರ್ತಿ ಮತ್ತೆ ಜೀವಂತಗೊಳಿಸಲು ಸಿದ್ಧವಾಗಿದೆ. ಈ ವಿಶಿಷ್ಟ ಹಬ್ಬವು . ಹನಿಪೆನಿಕ್ ಬೀ ಫಾರ್ಮ್ ಹಾಗೂ RO ಇಂಟರ್ನ್ಯಾಷನಲ್ನ ಇವುಗಳ ಜಂಟಿ ಪ್ರಾಯೋಜಕತ್ವದೊಂದಿಗೆ ಆಯೋಜಿಸಿರುವ ಈ ವಿಶಿಷ್ಟ ಕಾರ್ಯಕ್ರಮವು. ಸ್ಥಳೀಯ ಕೃಷಿ, ಆಹಾರ ಪರಂಪರೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಉತ್ಸುಕರಾದ ಯುವಜನರ ಬೆಂಬಲದಿಂದ ನಡೆಯಲಿದೆ ಎಂದು ಹೇಳಿದರು.
ಪ್ರಮುಖ ಮುಖ್ಯಾಂಶಗಳು ಹಾಗೂ ಆಕರ್ಷಣೆಗಳು
ರೈತರ ಮಾರುಕಟ್ಟೆ:
ರಾಜ್ಯದ ರೈತರಿಗೆ ಹಲಸು, ಮಾವು, ಅವಕಾಡೊ, ಡ್ರಾಗನ್ ಫೂಟ್, ರಾಂಬುಟಾನ್ ಮ್ಯಾಂಗೊನ್ ಮತ್ತು ಇತರ ಬೆಳೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಇದೊಂದು ವೇದಿಕೆಯಾಗಲಿದೆ. ಇವೆಲ್ಲವೂ ನೇರವಾಗಿ ರೈತರಿಂದಲೇ ಲಭ್ಯವಾಗಲಿದ್ದು ಈ ಮೂಲಕ ಸಾವಯವ ಮತ್ತು ಸುಸ್ಥಿರ ಉತ್ಪನ್ನಗಳಿಗೆ ಒತ್ತು ನೀಡಲಾಗುತ್ತದೆ.
ಹಲಸಿನ ಹಣ್ಣಿನಿಂದ ತಯಾರಿಸಲಾದ ವಿವಿಧ ಖಾದ್ಯಗಳು:
ಮಂಗಳೂರು ಮತ್ತು ಉಡುಪಿ ಪ್ರದೇಶಗಳ ಹಲಸಿನ ಹಣ್ಣಿನ ಆಹಾರ ಖಾದ್ಯಗಳು ಹಾಗೂ ಉತ್ಪನ್ನಗಳ ಮೇಲೆ ವಿಶೇಷ ಗಮನಹರಿಸಲಾಗುತ್ತದೆ. ಅಲ್ಲದೇ ಹಲಸಿನ ಹಣ್ಣು ಪ್ರಿಯರಿಗೆ ಇದೊಂದು ಹಬ್ಬವಾಗಲಿದ್ದು, ಸ್ಥಳೀಯವಾಗಿ ಪ್ರೇರಿತವಾದ ಖಾದ್ಯಗಳ ರುಚಿಯನ್ನು ಇಲ್ಲಿ ಉಣಬಡಿಸಲಾಗುತ್ತದೆ.
ವೋಕಲ್ ಫಾರ್ ಲೋಕಲ್: ಸಣ್ಣ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ:
ಈ ಹಲಸು ಹಬ್ಬದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳಿಗೆ ತಾವು ಮಾಡಿರುವ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ತಮ್ಮ ಸೇವೆ ಪ್ರದರ್ಶಿಸಲು ಅವಕಾಶ ಸಿಗಲಿದೆ. ಸ್ಥಳೀಯ ವ್ಯವಹಾರಗಳು ಮತ್ತು ಕುಶಲಕರ್ಮಿಗಳನ್ನು ಬೆಂಬಲಿಸಲು ಸಮುದಾಯವನ್ನು ಪ್ರೋತ್ಸಾಹಿಸುವುದು ಕೂಡಾ ಈ ಮೇಳದ ಪ್ರಮುಖ ಉದ್ದೇಶವಾಗಿದೆ.
ಯುವ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು:
ಈ ಉತ್ಸವವು ಮುಂದಿನ ಪೀಳಿಗೆಯ ಉದ್ಯಮಿಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹವನ್ನು ಒದಗಿಸುವುದು, ನಾವೀನ್ಯತೆ ಮತ್ತು ಸ್ವಾವಲಂಬನೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮನರಂಜನೆ:
ಹಬ್ಬದ ಉತ್ಸಾಹಕ್ಕೆ ಇಮ್ಮಡಿಗೊಳಿಸಲು ಹಾಗೂ ಜನರನ್ನು ಆಕರ್ಷಿಸುವ ಸಲುವಾಗಿ ಇಲ್ಲಿ ಆಟಗಳು, ಮೋಜಿನ ಚಟುವಟಿಕೆಗಳು ಸೇರಿದಂತೆ ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಮಂಗಳೂರು ಸಿಟಿ ರೋಟರಾಕ್ಟ್ ಕ್ಲಬ್ನ ಸದಸ್ಯರು ಆಯೋಜಿಸುವ ಲೈವ್ ಓಪನ್ ಮೈಕ್ ಕಾರ್ಯಕ್ರಮವನ್ನು ಕೂಡಾ ಒಳಗೊಂಡಿರುತ್ತದೆ.
ಕುಡ್ಲ ಪೆಲಕಾಯಿ ಪರ್ಬವು ಕೇವಲ ಹಬ್ಬವಷ್ಟೇ ಅಲ್ಲ ಅದಕ್ಕೂ ಮಿಗಿಲಾದದ್ದು. ಇದು ಕರಾವಳಿಯ ಪರಂಪರೆಯನ್ನು, ನಮ್ಮ ಮೂಲವನ್ನು ಆಚರಿಸುವ, ರೈತರನ್ನು ಬೆಂಬಲಿಸುವ, ಸ್ಥಳೀಯ ವ್ಯಾಪಾರವನ್ನು ಉನ್ನತೀಕರಿಸುವ ಮತ್ತು ಆಹಾರ, ಸಂಸ್ಕೃತಿ ಮತ್ತು ಸಹಯೋಗದ ಮೂಲಕ ಸಮುದಾಯಗಳನ್ನು ಒಗ್ಗೂಡಿಸುವ ಒಂದು ಚಳವಳಿಯಾಗಿದೆ. ಈ ಅಪರೂಪದ ಹಾಗೂ ಸಮಾಜವನ್ನು ಮತ್ತಷ್ಟು ಸಬಲೀಕರಣಗೊಳಿಸುವ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಶ್ವಿನ್ ಸಿಕ್ಕೇರಾ- 91646 09688ರನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಸಹಾಯಕ ಸಂಯೋಜಕರಾದ ಶ್ರೀಕಾಂತ್ ಪೈ, ಜಾಕ್ಸನ್ ಸಲ್ಡಾನ, ಸದಸ್ಯೆಅದ ವೀವನ್ ಪಿಂಟೋ, ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
For Video
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj