ಶ್ರೀ ಭಗವತೀ ಸಹಕಾರ ಬ್ಯಾಂಕ್ ವಿರುದ್ಧ ರಿಸರ್ವ್‌ ಬ್ಯಾಂಕ್‌, ಅಮಿತ್‌ ಶಾ ಸಹಿತ ಹಲವೆಡೆ ದೂರು!

ಮಂಗಳೂರು: ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ಅವ್ಯವಹಾರದ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ದೂರುದಾರ ಹರೀಶ್‌ ಕುಮಾರ್‌ ಇರಾ ಅವರು, ಈ ಬ್ಯಾಂಕ್‌ ವಿರುದ್ಧ ಬ್ಯಾಂಕ್‌ ಉಪ ನಿಬಂಧಕರು- ಮಂಗಳೂರು, ಲೆಕ್ಕ ಪರಿಶೋಧಕರು -ಉಡುಪಿ, ಜಂಟಿ ನಿಬಂಧಕರು- ಬೆಂಗಳೂರು, RBI ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಸಹಕಾರ ಸಚಿವರು ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರಿಗೂ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಅವರು ಬ್ಯಾಂಕಿನ ಸಿಬ್ಬಂದಿಯನ್ನು ಮೂರು ವರ್ಷ ಆದರೂ ವರ್ಗಾವಣೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ದ.ಕ.ಜಿಲ್ಲೆಯಾದ್ಯಂತ ಒಟ್ಟು 8 ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಈ ಬ್ಯಾಂಕ್‌ನ ಮಾಜೀ ನಿರ್ದೇಶಕನಾಗಿದ್ದು, ಈ ಬ್ಯಾಂಕಿನ ಜಪ್ಪು ಶಾಖೆಯಲ್ಲಿ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ರೂ.40 ಲಕ್ಷ ಸಾಲ ನೀಡಿದ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು ಅವುಗಳನ್ನು ಸಲ್ಲಿಸಿ ನಾನು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ. ಅದರಂತೆ ನ್ಯಾಯಾಲಯವು ಬ್ಯಾಂಕಿನ ಅಧ್ಯಕ್ಷ, ಪ್ರಧಾನ ವ್ಯವಸ್ಥಾಪಕ ಮತ್ತು ಶಾಖಾ ವ್ಯವಸ್ಥಾಪಕರ ಮೇಲೆ FIR ದಾಖಲಿಸಿ ತನಿಖಾ ಹಂತದಲ್ಲಿದೆ.

ಇದೀಗ ಸಿಬ್ಬಂದಿಯ ಮೂಲಕ ನನಗೆ ಬಂದಿರುವ ಮಾಹಿತಿ ಪ್ರಕಾರ ಈ ಬ್ಯಾಂಕಲ್ಲಿ ಸುಮಾರು 8 ವರ್ಷಗಳಿಂದೀಚೆಗೆ ಯಾವುದೇ ವರ್ಗಾವಣೆ ನಡೆದಿರುವುದಿಲ್ಲ. ಬ್ಯಾಂಕಿನ ನಿಯಮಾನುಸಾರ ಪ್ರತೀ ಮೂರು ವರ್ಷಕ್ಕೊಮ್ಮೆ ಎಲ್ಲಾ ಸಿಬ್ಬಂದಿಯನ್ನು ಸ್ಥಾನಪಲ್ಲಟ ಮಾಡುವುದು ವಾಡಿಕೆ. ಆದರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿಯು ವಾರ್ಷಿಕ ಲೆಕ್ಕ ಪರಿಶೋಧನೆ, ಮಹಾಸಭೆ, ವರ್ಷಾಂತ್ಯದ  ಲೆಕ್ಕ, ಚುನಾವಣೆ ಎಂಬ ಇಲ್ಲ ಸಲ್ಲದ ನೆಪ ಹೇಳಿಕೊಂಡು ಕಳೆದ 8 ವರ್ಷಗಳಿಂದ ಸಾಮೂಹಿಕ ವರ್ಗಾವಣೆ ಮಾಡಿಲ್ಲ. ಇದರ ಬದಲಾಗಿ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿದ ಜಪ್ಪು ಶಾಖೆಯ ಶಾಖಾ ವ್ಯವಸ್ಥಾಪಕರಾದ ರಾಘವ ಉಚ್ಚಿಲ ಎಂಬವರನ್ನು ಮಾರಾಟಧಿಕಾರಿಯಾಗಿ ನೇಮಿಸಿ ಪದನ್ನೋತಿಗೊಳಿಸುವ ಸಂಚು ನಡೆಯುತ್ತಿದೆ.
ಬ್ಯಾಂಕಿನ ಒಟ್ಟು 8 ಶಾಖೆಗಳ ಪೈಕಿ 4 ಶಾಖೆಗಳು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಉಳಿದ 4 ಶಾಖೆಗಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯ ನೌಕರರಿಗೆ ಮನೆ ಬಾಡಿಗೆ ತೆರಿಗೆ ಅನ್ವಯವಾಗುದಿಲ್ಲ.

ಈ ಬ್ಯಾಂಕಿಗೆ ಚುನಾಯಿತ ಆಡಳಿತ ಮಂಡಳಿ ಭಷ್ಟಚಾರದಲ್ಲಿ ಭಾಗಿದಾರರಾಗಿರುವುದು ಸ್ಪಷ್ಟವಾಗಿ ಕಾಣುವುದರಿಂದ ತಾವು ಈ ಬಗ್ಗೆ ತನಿಖೆ ನಡೆಸಿ ಬ್ಯಾಂಕ್ ಅನ್ನು ಭಷ್ಟಚಾರ ಮುಕ್ತವಾಗಿ ಮುನ್ನಡೆಸಲು ಆದಷ್ಟು ಬೇಗ ವರ್ಗಾವಣೆ ನೀತಿಯನ್ನು ಸರಿಪಡಿಸಲು ಸೂಚಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಗಳಿಕೆ ರಜೆ ಭತ್ಯೆಯನ್ನು ನೀಡದೆ ಸತಾಯಿಸುವುದು, ವೈಯಕ್ತಿಕ ದ್ವೇಷದಿಂದ ಸಿಬ್ಬಂದಿ, ಸದಸ್ಯರನ್ನು ಆಮಾನತು, ವಜಾ ಮಾಡುವುದು ಇತ್ಯಾದಿ ಪ್ರಜಾಪ್ರಭುತ್ವ ವಿರೋಧಿ ನಿಲುವಿನಿಂದಾಗಿ ಸಂಸ್ಥೆಯು ಹೈರಣಾಗಿ ಹೋಗಿರುತ್ತದೆ. ಈ ಬ್ಯಾಂಕಿಗೆ ಚುನಾಯಿತ ಆಡಳಿತ ಮಂಡಳಿ ಭಷ್ಟಚಾರದಲ್ಲಿ ಭಾಗಿದಾರರಾಗಿರುವುದು ಸ್ಪಷ್ಟವಾಗಿ ಕಾಣುವುದರಿಂದ ತಾವು ಈ ಬಗ್ಗೆ ತನಿಖೆ ನಡೆಸಿ ಬ್ಯಾಂಕ್ ಅನ್ನು ಭಷ್ಟಚಾರ ಮುಕ್ತವಾಗಿ ಮುನ್ನಡೆಸಲು ಆದಷ್ಟು ಬೇಗ ವರ್ಗಾವಣೆ ನೀತಿಯನ್ನು ಸರಿಪಡಿಸಲು ಸೂಚಿಸಬೇಕಾಗಿ ಸಿಬ್ಬಂದಿಗಳ ಪರವಾಗಿ ಕೇಳಿಕೊಳ್ಳುತ್ತೇನೆ. ಈಗಾಗಲೇ ತಮಗೆ ಹಲವಾರು ಪತ್ರಗಳನ್ನು ಬರೆದಿದ್ದು, ಯಾವುದಕ್ಕೂ ಸ್ಪಂದನೆ ಸಿಕ್ಕಿರುವುದಿಲ್ಲ. ತ್ವರಿತ ಗತಿಯಲ್ಲಿ ಈ ಪತ್ರಕ್ಕೆ ಸ್ಪಂದಿಸಿ ಪಾರದರ್ಶಕ ಆಡಳಿತಕ್ಕಾಗಿ ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!