ಮಂಗಳೂರು: ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ, ರಾಜ್ಯದ ಜನರ ಸಾಮಾಜಿಕ ಭದ್ರತೆಗೆ ಆಗ್ರಹಿಸಿ ಜೂನ್ 23ರಂದು ಸ್ಥಳೀಯಾಡಳಿತ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದ್ದಾರೆ.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಎಲ್ಲಾ ಗ್ರಾಮ ಪಂಚಾಯತ್, ನಗರ ಸಭೆ, ಪರ ಸಭೆ, ಪಟ್ಟಣ ಪಂಚಾಯತ್ ಮುಂಭಾಗ ಸ್ಥಳೀಯ ನಾಗರಿಕರನ್ನು ಸೇರಿಸಿ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ಕೆಡಿಪಿ ಸಭೆ, ವಿಧಾನ ಸಭ ಅಧಿವೇಶದಲ್ಲಿ ಮನವಿ ಮಾಡಿದ್ರೂ ಜನತೆಯ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ನೈನ್ಲೆವೆನ್ ಅರ್ಜಿ ದೂಳು ಹಿಡಿಯುತ್ತಿದೆ. ನಕ್ಷೆಗಾಗಿ ಪ್ರಾಧಿಕಾರಕ್ಕೆ ಹೋಗ್ಬೇಕಾಗಿದೆ. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ತಾಲೂಕು ಮಟ್ಟದ ಅಕ್ರಮ ಸಕ್ರಮ ಸಮತಿಯ ಗಮನಕ್ಕೆ ತರದೆ ಅರ್ಜಿಗಳನ್ನು ಅಕ್ರಮ ಸಕ್ರಮ ತಿರಸ್ಕಾರ ಮಾಡಲಾಗುತ್ತಿದೆ. ಅಕ್ರಮ ಸಕ್ರಮ ಯೋಜನೆಯ ನಿಯಮಗಳನ್ನು ಸರಳೀಕರಣಗೊಳಿಸದಿರುವುದು ಸರ್ಕಾರದ ರೈತ ವಿರೋಧೀ ನಿಲುವಾಗಿದೆ. ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಿದರು.
ಕುಮ್ಕಿ ಭೂಮಿ ಉಳಿದಿದ್ದು ರೈತರಿಂದ. ಇಲ್ಲದೇ ಹೋಗಿದ್ದರೆ ಆ ಭೂಮಿ ಭೂಮಾಫಿಯಾಕ್ಕೆ ಹೋಗುತ್ತಿತ್ತು. ಆಶ್ರಯ ಮನೆ ಸಮಸ್ಯೆಯಿಂದ ಬಡವರಿಗೆ ಸೂರು ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಬಿಜೆಪಿ 100 ರಷ್ಟು ಮನೆ ಕೊಟ್ಟಿದೆ. ಆದರೆ ಕಾಂಗ್ರೆಸ್ ಎರಡು ವರ್ಷಗಳಿಂದ ಆಶ್ರಯ ಮನೆ ಕೊಟ್ಟಿಲ್ಲ. ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 100 ಮನೆ ಕೊಡಬೇಕು ಎಂದು ಆಗ್ರಹಿಸಿದರು.
ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಯೋಜನೆಯಿಂದ ಬಡಜನರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಸಾಮಾಜಿಕ ಭದ್ರತಾ ಯೋಜನೆಗಳಿಂದ ಜನರನ್ನು ವಂಚಿತರನ್ನಾಗಿಸಲಾಗುತ್ತದೆ. ಇದರ ಡಾಟಾವನ್ನು ತೆಗೆದು ಸಂಬಂಧಪಟ್ಟವರಿಗೆ ಸಲ್ಲಿಸಲಾಗುಗುವುದು ಎಂದರು.
ಸರ್ಕಾರ ವಿದ್ಯುತ್ ಬೆಲ ಏರಿಕೆ ಮಾಡಿ, ಒಂದು ಕಡೆ ಕೊಟ್ಟು ಇನ್ನೊಂದು ಕಡೆ. ಇದರ ವಿರುದ್ಧ 399 ಸ್ಥಳೀಯಾಡಳಿತ ಕಚೇರಿಗಳ ಮುಂಚೆ ಪ್ರತಿಭಟನೆ ನಡೆಸುತ್ತೇವೆ. ಅದಲ್ಲರೂ ದಕ್ಷಿಣ ಕನ್ನಡದಲ್ಲ ಸುಮಾರು 223 ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮುನ್ಸಿಮಾಲಟಿ
ಪಟ್ಟಣ ಪಂಚಾಯತ್, ಪುರಸಭೆ ನಗರಸಭೆ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು. ಮಳೆಹಾನಿ ಪರಿಹಾರಕ್ಕೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿ ಪ್ರಸಾದ್ ಹೆಗ್ಡೆ, ಪೂರ್ಣಿಮಾ ಎಂ, ಪ್ರಭಾಕರ ಪ್ರಭು ಮತ್ತಿತರರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj