ನದಿ ನೀರು ವೀಕ್ಷಿಸುತ್ತಿದ್ದಾಗ ಕೊಚ್ಚಿಹೋದ ಸೇತುವೆ: 25ಕ್ಕೂ ಅಧಿಕ ಮಂದಿ ನೀರುಪಾಲು!

ಪುಣೆ: ಇಲ್ಲಿನ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದ ಪರಿಣಾಮ ನದಿಯಲ್ಲಿನ ನೀರು ವೀಕ್ಷಣೆಗೆಂದು ಆಗಮಿಸಿದ್ದ ಕನಿಷ್ಠ 20 ರಿಂದ 25 ಮಂದಿ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಇಂದು ಸಂಜೆ ವರದಿಯಾಗಿದೆ.


ತಲೆಗಾಂವ್ ಪ್ರದೇಶದ ಕುಂಡ್ಮಾಲ್ ಬಳಿ ಹಳೆಯ ಸೇತುವೆ ಮಳೆಯ ಆರ್ಭಟಕ್ಕೆ ಸಿಲುಕಿ ಕೊಚ್ಚಿ ಹೋಗಿದೆ.‌ ಈ ವೇಳೆ ಸ್ಥಳದಲ್ಲಿ 50ಕ್ಕೂ ಅಧಿಕ ಮಂದಿ ನೆರೆದಿದ್ದು ನೆರೆಯ ನೀರು ವೀಕ್ಷಿಸುತ್ತಿದ್ದರು.

ಅವರಲ್ಲಿ ಕೆಲವರು ಅಪಾಯದಿಂದ ಪಾರಾದರೆ 25ಕ್ಕೂ ಅಧಿಕ ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಪೊಲೀಸ್‌ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.

error: Content is protected !!