ಭೀಕರ ಅಗ್ನಿ ದುರಂತ: ಅಪಾರ್ಟ್‌ಮೆಂಟ್‌ ನಿಂದ ಜಿಗಿದು ತಂದೆ, ಇಬ್ಬರು ಮಕ್ಕಳ ಸಾವು

ನವದೆಹಲಿ: ಜನವಸತಿಯ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು 9ನೇ ಮಹಡಿಯಿಂದ ಹಾರಿದ ಪರಿಣಾಮ ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ಮಂಗಳವಾರ (ಜೂನ್‌ 10) ನಡೆದಿದೆ.

ದೆಹಲಿಯ ದ್ವಾರದಲ್ಲಿರುವ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆ ಆವರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದ್ವಾರಕಾ ಸೆಕ್ಟರ್‌ 13ರಲ್ಲಿನ ಎಂಆರ್‌ ವಿ ಶಾಲೆ ಸಮೀಪದ ಸಂಪತ್‌ ಸೊಸೈಟಿ ರೆಸಿಡೆನ್ಸಿಯಲ್‌ ಕಟ್ಟಡದ ಎಂಟು ಮತ್ತು ಒಂಬತ್ತನೇ ಅಂತಸ್ತಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಂದೆ ತನ್ನ ಇಬ್ಬರು ಮಕ್ಕಳೊಂದಿಗೆ 9ನೇ ಮಹಡಿಯಿಂದ ಕೆಳಗೆ ಹಾರಿದ್ದು, ಮೂವರು ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

ಘಟನೆಯಲ್ಲಿ ಯಶ್‌ ಯಾದವ್‌ (35 ವರ್ಷ) ಹಾಗೂ ಇಬ್ಬರು ಮಕ್ಕಳು ಸಾವ*ನ್ನಪ್ಪಿದ್ದಾರೆ. ಆದರೆ ಯಾದವ್‌ ಪತ್ನಿ ಹಾಗೂ ಹಿರಿಯ ಪುತ್ರನನ್ನು ಅಗ್ನಿ ಅವಘಡದಿಂದ ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!