ಕಾರ್ಕಳ: ಅಗ್ನಿ ಅವಘಡಕ್ಕೆ ತುತ್ತಾಗಿ ಅಸುನೀಗಿದ ಕಂಬಳದ ಹೀರೋಗಳಾದ ಅಪ್ಪು ಹಾಗೂ ಜೋತೆ ಜೋಡು ಕೋಣಗಳ ಪಾರ್ಥೀವ ಶರೀರವನ್ನು ಹಿಂದೂ ಧಾರ್ಮಿಕ ವಿಧಿ ವಿಧಾನಳಂತೆ ದಫನ ಸಂಸ್ಕಾರ ನಡೆಸಲಾಯಿತು.
ಕೋಣಗಳ ಪಾರ್ಥೀವ ಶರೀರಕ್ಕೆ ಎಣ್ಣೆ ಸ್ನಾನ ಮಾಡಿಸಿ, ಅಂತಿಮ ವಿಧಿ ವಿಧಾನಗಳನ್ನು ಸಲ್ಲಿಸಿ, ಬಿಳಿ ವಸ್ತ್ರಗಳನ್ನು ಸುತ್ತಿ ಭೂಮಿಯಲ್ಲಿ ಇಬ್ಬರ ಮೃತದೇಹಗಳನ್ನೂ ಒಂದೇ ಗುಂಡಿಯಲ್ಲಿ ದಫನ ಮಾಡಲಾಯಿತು. ಕೋಣಗಳ ಯಜಮಾನ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರು ಎರಡೂ ಕೋಣಗಳ ಬಾಯಿಗೆ ಗಂಗಾ ಜಲ ಅರ್ಪಿಸುವಾಗ ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು. ಆಗ ನೆರೆದಿದ್ದರೂ ಅಶ್ರುತರ್ಪಣ ಸುರಿಸಿದರು.
ಮೇ.30ರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಹಟ್ಟಿಯಲ್ಲಿ ಕಟ್ಟಿದ್ದ ಅಪ್ಪು- ತೋನ್ಸೆ ಕಂಬಳ ಕೋಣಗಳು ಮೃತಪಟ್ಟಿದ್ದವು. ಬೆಳಿಗ್ಗೆ ಕೆಲಸದ ಆಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.