ಕೇರಳ: ಮಂಗಳೂರಿನಿಂದ ಕೇರಳದ ಕೊಟ್ಟಾಯಂ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬೌಸರ್ ಗಳಾಗಿ ತೆರಳಿದ್ದ ಕಾರೊಂದು ಪಲ್ಟಿಯಾಗಿ ಸುರತ್ಕಲ್ ಮೂಲದ ಬೌನ್ಸರ್ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಇಂದು(ಜ.28) ಬೆಳಿಗ್ಗೆ ನಡೆದಿದೆ.

ಮುಲ್ಕಿ ತಾಲೂಕಿನ ಅಂಗಾರಗುಡ್ಡೆ ನಿವಾಸಿ ಪ್ರಸ್ತುತ ಕಾನ ಚಿರಾಗ್ ಫ್ಲಾಟ್ ನಲ್ಲಿ ವಾಸವಿರುವ ಶಾ ನವಾಝ್ ಯಾನೆ ಶಮೀಮ್ ಮೃತ ವ್ಯಕ್ತಿ. ಈತನ ಜೊತೆ ಕಾರಿನಲ್ಲಿ ಕಾಟಿಪಳ್ಳದ ನಿವಾಸಿ ಸಿರಾಜ್, ಕಾನ ನಿವಾಸಿಗಳಾದ ಅಶ್ಫಾಕ್, ಶಮೀಮ್, ಸೂರಿಂಜೆ ನಿವಾಸಿ ಶಬೀರ್, ರಾಜಸ್ಥಾನ ಮೂಲದ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ಕೇರಳದ ಕೊಟ್ಟಾಯಂ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬೌಸರ್ ಗಳಾಗಿ ತೆರಳಿದ್ದ ವೇಳೆ ಇಂದು ಬೆಳಗ್ಗೆ ಚಾ ಕುಡಿಯುವ ಸಲುವಾಗಿ ಎಲ್ಲರೂ ಕಾರು ಏರಿಕೊಂಡು ಪೇಟೆಕಡೆ ಬರುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 20ಅಡಿ ಆಳಕ್ಕೆ ಬಿದ್ದಿದೆ ಎನ್ನಲಾಗಿದೆ.

ಈ ವೇಳೆ ಕಾರಿನಲ್ಲಿದ್ದ ಶಾ ನವಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿರಾಜ್ ಗೆ ಗಂಭೀರ ಗಾಯಗಾಳಾಗಿದ್ದು, ತೇಜಸ್ವಿನಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಬೀರ್ ಸೂರಿಂಜೆ ಮತ್ತು ಅಶ್ಪಾಖ್ ಕಾನ ಅವರು ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿದ್ದಾರೆ. ಇನ್ನೂ ರಾಜಸ್ಥಾನ ಮೂಲದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.