ಮರದಿಂದ ಬಿದ್ದು ಯುವಕನ ಬೆನ್ನುಮೂಳೆ ಮುರಿತ: ಹಣ ಖರ್ಚಾಗುತ್ತದೆಂದು ಸಾಯಿಸಿ ಬಿಟ್ಟ ಸ್ನೇಹಿತರು

ಬೆಂಗಳೂರು: ಜೊತೆಗಿದ್ದ ಸ್ನೇಹಿತರೇ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದ ಬಳಿ ನಡೆದಿದೆ.

ವಿನೋದ್ ಕುಮಾರ್ (26) ಹತ್ಯೆಗೀಡಾದ ವ್ಯಕ್ತಿ.

ಪಾರ್ಟಿಗೆ ತೆರಳಿದ್ದ ಸ್ನೇಹಿತರು, ಡ್ರಿಂಕ್ಸ್ ಗೆ ಬೆರೆಸಲು ಎಳನೀರು ಬೇಕೆಂದು ವಿನೋದ್ ಮರ ಹತ್ತಿದ್ದ. ಈ ವೇಳೆ ಮರದಿಂದ ಬಿದ್ದ ವಿನೋದ್ ಕುಮಾರ್ ಬೆನ್ನುಮೂಳೆ ಮುರಿದುಹೋಗಿತ್ತು. ಹೀಗಾಗಿ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ.

ಪೊಲೀಸರ ತನಿಖೆಯಿಂದ ಕೊಲೆ ಪ್ರಕರಣ ಬಹಿರಂಗವಾಗಿದ್ದು, ಸದ್ಯ ಸ್ನೇಹಿತನನ್ನು ಕೊಲೆ ಮಾಡಿದ ಸುದೀಪ್, ಪ್ರಜ್ವಲ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!