ಮನೆಗೆ ಬಾ ಲಕ್ಷ್ಮಣ!!! ಕೆಲಸಕ್ಕೆ ಹೊರಟ ಯುವಕ ನಿಗೂಢ ನಾಪತ್ತೆ

ಉಡುಪಿ: ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ಬದುಕಿಗೆ ಆಸರೆಯಾಗಿದ್ದ ಉದ್ಯಾವರ ಗ್ರಾಮದ ಯುವಕ ಲಕ್ಷ್ಮಣ ಛಲವಾದಿ (23) ನವೆಂಬರ್ 23ರಂದು ಕೆಲಸಕ್ಕೆಂದು ಮನೆಯಿಂದ ಹೊರಟ ಬಳಿಕ ಇನ್ನೂ ಮನೆಗೆ ಮರಳಿಲ್ಲ.

ಸುಮಾರು 5 ಅಡಿ 1 ಇಂಚು ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿರುವ ಲಕ್ಷ್ಮಣ ಕನ್ನಡ ಭಾಷೆ ಮಾತನಾಡುತ್ತಾರೆ. “ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತೇನೆ” ಎಂದು ಹೇಳಿ ಹೊರಟಿದ್ದ ಪುತ್ರ ಮತ್ತೆ ಕಾಣಿಸಿಕೊಳ್ಳದಿರುವುದು ಮನೆಯವರ ಮನದಲ್ಲಿ ಆತಂಕದ ಕರಿಛಾಯೆ ಆವರಿಸಿದೆ.

ಲಕ್ಷ್ಮಣನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ (0820-2526444 / 2526709), ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿ (08258-231333), ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ (0820-2572333, ಮೊ.9480805431) ಅಥವಾ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು (0820-2551033, ಮೊ.9480805449) ಅವರನ್ನು ಸಂಪರ್ಕಿಸುವಂತೆ ಕಾಪು ಪೊಲೀಸ್ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ.

error: Content is protected !!