ಮಂಜೇಶ್ವರ: ನಗರದ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಅನ್ನು ಅತ್ಯಂತ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು. ಕ್ರಿಸ್ಮಸ್ ಅದರ ನಿಜವಾದ ಅರ್ಥದಲ್ಲಿ ಹೊಸತನದ ಜನನ, ಸಂತೋಷ, ಮಾನವಕುಲಕ್ಕೆ ಸೇವಾ ಮನೋಭಾವವನ್ನು ಈ ಸಮಾರಂಭ ಸಾರಿತು.


ಕ್ರಿಸ್ಮಸ್ ಸಂಭ್ರಮ – 2025.” ವು ಸಾಂಸ್ಕೃತಿಕ ಹಬ್ಬ, ವಿಶ್ವ ದಾಖಲೆ ಹೊಂದಿರುವ ರೆಮೋನಾ ಇವೆಟ್ ಪಿರೇರಾ ಅವರಿಂದ ಯೇಸುವಿನ ಜನನದ ಕಥೆಯನ್ನು ಅಭಿನಯಿಸುವ ಭರತನಾಟ್ಯ ಪ್ರದರ್ಶನ ಮತ್ತು ಪ್ರಸಿದ್ಧ ಗಾಯಕರಾದ ಜೋಶಲ್ ಮತ್ತು ಜೇಸನ್ ಅವರ ಸುಮಧುರ ಕ್ಯಾರೋಲ್ ಗಾಯನ, ಮಾಸ್ಟರ್ ಸಂಗೀತಗಾರ ಸಂಜಯ್ ರೊಡ್ರಿಗಸ್ ನಿರ್ದೇಶನ, ಹೊರಿಝೊನ್ ತಂಡ ಮತ್ತು ಅರ್ಬನ್ ಗ್ರೂವ್ ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳ ಸೂಪರ್ ಕಾಂಬೊ ಆಗಿತ್ತು.


ಅತೀ ವಂದನೀಯ ಬಿಷಪ್ ಹೇಮಚಂದ್ರ ಕುಮಾರ್, ಒಫ಼್ ಚರ್ಚ್ ಒಫ಼್ ಸೌತ್ ಇಂಡಿಯಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಆಚರಣೆಗೆ ಮುನ್ನ ಕ್ಯಾಂಪಸ್ಗೆ ಭೇಟಿ ನೀಡಿದರು, ಅವರು ನಿವಾಸಿಗಳನ್ನು ಆಶೀರ್ವದಿಸಿದರು ಮತ್ತು ಪ್ರೀತಿ, ಕರುಣೆ ಮತ್ತು ಮಾನವೀಯ ಕಾರ್ಯಗಳ ಅದ್ಭುತ ಸಂದೇಶವನ್ನು ನೀಡಿದರು ಮತ್ತು ನಾವು ಏನೇ ಮಾಡಿದರೂ ಕ್ರಿಸ್ತರು ಕಲಿಸಿದ ಮೌಲ್ಯಗಳನ್ನು ಅನುಸರಿಸಲು ಕರೆ ನೀಡಿದರು.


ಗೌರವಾನ್ವಿತ ಅತಿಥಿಗಳಾಗಿ ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಶೆಟ್ಟಿ ಉಪಸ್ಥಿತಿ ಇದ್ದು, ಕ್ರಿಸ್ತ ಮತ್ತು ಕೃಷ್ಣರನ್ನು ಹೋಲಿಸುವ ಅದ್ಭುತ ಸಂದೇಶದೊಂದಿಗೆ ಸಭಿಕರ ಹೃದಯಗಳನ್ನು ಮುಟ್ಟಿದರು. ಎಲ್ಲಾ ಧರ್ಮಗಳ ನಡುವಿನ ಸಮಾನತೆ ಹಾಗು ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಸೇವೆಯನ್ನು ಶ್ಲಾಘಿಸಿದರು.

ನೂತನವಾಗಿ ಆಯ್ಕೆಯಾದ ಕಾಸರಗೋಡು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಹರ್ಷದ್ ವೋರ್ಕಾಡಿ ಅಂದೇ ಪ್ರಮಾಣ ವಚನ ಮತ್ತು ಅಧಿಕಾರ ಸ್ವೀಕಾರ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡು ಜೋಸೆಫ್ ಹಾಗೂ ಅವರ ಮಿಷನ್ನ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡರು ಮತ್ತು ವಿನಮ್ರ ಕೆಲಸವನ್ನು ಹೇಗೆ ಆಶೀರ್ವದಿಸಲಾಗುತ್ತಿದೆ ಎಂಬುದನ್ನು ಉದಾಹರಣೆಯಾಗಿ ನೀಡಿದರು. ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಅತ್ಯುತ್ತಮ ಮಾನವತಾವಾದಿ, ದಾನಿ, ದೆಹಲಿಯ ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಮತ್ತು ಬಾಂಬೆಯ ಪಿಟಿಐ ಕನ್ಸಲ್ಟೆನ್ಸಿಯ ಮಾಲೀಕರು ಶ್ರೀ ಜೋಸೆಫ್ ಎಲಿಯಾಸ್ ಮಿನೆಜಸ್, ತಮ್ಮ ಕಾವ್ಯಾತ್ಮಕ ಶೈಲಿಯಲ್ಲಿ ತಮ್ಮ ಅನುಭವ ಹಾಗೂ ಭಾವನೆಗಳನ್ನು ಹಂಚಿ ಕೊಂಡರು. ಅವರ ಸಕಾಳಿಕ ಕ್ರಿಸ್ಮಸ್ ಸಂದೇಶ ಅದ್ಭುತವಾಗಿತ್ತು. ಅವರ ಮಾತುಗಳು ಆಳವಾಗಿ ಅಂತರಂಗ ಸ್ಪರ್ಶಿಸಲ್ಪಟ್ಟವು. ನಿಜವಾದ ಕ್ರಿಸ್ತರು ಸ್ನೇಹಾಲಯದಂತಹ ಈ ಸಂಸ್ಥೆಗಳಲ್ಲಿ ಹುಟ್ಟುತ್ತಾರೆ, ಮರುಜನ್ಮ ಪಡೆಯುತ್ತಾರೆ ಮತ್ತು ಇಂತಹ ಮಾನವೀಯ ಕಾರ್ಯಗಳನ್ನು ಮುಂದುವರಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಕರ್ನಾಟಕದ ಹೆಮ್ಮೆಯ ಸುಪುತ್ರ ಈಶ್ವರ್ ಮಲ್ಪೆಯವರು ಸಂಭ್ರಮದ ಆಕರ್ಷಣೆ ಯಾಗಿದ್ದರು. ನೂರಾರು ಜೀವಗಳನ್ನು ಉಳಿಸಲು, ಮ್ರತ ದೇಹಗಳನ್ನು ಮರಳಿ ಪಡೆಯಲು ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪರರಿಗಾಗಿ ಸೇವೆ ಮಾಡುತ್ತಿರುವ ಈಶ್ವರ್ ಮಲ್ಪೆ, ಉರಿವ ದಿಪದಡಿ ಕತ್ತಲು ಎಂಬ ವ್ಯಾಖ್ಯಾನದಂತೆ ತನ್ನ ಮನೆಯ ಪರಿಸ್ಥಿತಿ ಉಲ್ಲೇಖಿಸಿದಾಗ ನೆರೆದವರ ಕಣ್ಣಂಚಿನಲ್ಲಿ ನೋವಿನ ಕಣ್ಣಿರು ಹರಿಯಿತು. ಅವರು ದಿನದ ಪ್ರಮುಖ ಆಕರ್ಷಣೆಯಾಗಿದ್ದರು. ಅವರನ್ನು ಗೌರವದಿಂದ ಸನ್ಮಾನಿಸಲಾಯಿತು ಮತ್ತು ಅವರ ಸಂದೇಶವು ಹೃದಯ ವಿದ್ರಾವಕವಾಗಿತ್ತು. ಅವರ ಸ್ವಂತ ಕುಟುಂಬದ ಪರಿಸ್ಥಿತಿ, ಸ್ವಂತ ಮಗುವನ್ನು ಕಳೆದುಕೊಂಡಿರುವುದು, ಅವರ ಇಬ್ಬರು ಮಕ್ಕಳು ವಿಶೇಷ ಚೇತನ ಮಕ್ಕಳಾಗಿದ್ದರೂ ಅವರು ಹಣ, ಕೀರ್ತಿಯನ್ನು ಹುಡುಕುತ್ತಿಲ್ಲ. ಈ ಸಮಾಜದಲ್ಲಿ ಹಲವಾರು ಒಳ್ಳೆಯ ಹೃದಯದ ವ್ಯಕ್ತಿಗಳಿದ್ದಾರೆ ಎಂದು ಅವರು ಬಣ್ಣಿಸಿದರು.

ಕರ್ನಾಟಕ ಕೊಂಕಣಿ ಬಾಷಾ ಮಂಡಲದ ಅಧ್ಯಕ್ಷರು ಮತ್ತು ಪಿಂಗಾರ ಪತ್ರಿಕೆಯ ಸ್ಥಾಪಕರು, ಸಂಪಾದಕರೂ ಆದ ಶ್ರೀ. ರೇಮಂಡ್ ಡಿ ಕುನ್ಹಾ ತಾಕೋಡೆ, ಸಂದರ್ಬೋಚಿತವಾಗಿ ಮಾತಾನಾಡಿ ಸ್ನೇಹಾಲಯದೊಂದಿಗಿನ ಹಾಗು ಜೊಸೇಫ಼್ಹ್ ಅವರ ಬಾಂಧವ್ಯದ ಬಗ್ಗೆ ಸೂಕ್ತವಾಗಿ ಮಾತನಾಡಿದರು.
ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಸಂಯೋಜಿತ ನಿರ್ದೇಶಕ ರೆವರೆಂಡ್ ಫಾದರ್ ವಿನ್ಸೆಂಟ್ ಕ್ರಾಸ್ತಾ, ಸ್ನೇಹಾಲಯದ ರೆವರೆಂಡ್ ಫಾದರ್ ಸಿರಿಲ್ ಡಿ ಸೋಜಾ ಅವರು ವೇದಿಕೆಯಲ್ಲಿ ವಿಶೇಷ ಅತಿಥಿಗಳಾಗಿದ್ದರು. ಬ್ರದರ್ ಜೋಸೆಫ್ ಕ್ರಾಸ್ತಾ ಅವರು ತಮ್ಮ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಹೃತ್ಪೂರ್ವಕವಾಗಿ ಶಾಲು ಹೊದಿಸಿ ಹೂವುಗಳೊಂದಿಗೆ ಸ್ವಾಗತಿಸಿದರು. ಶ್ರೀಮತಿ ಒಲಿವಿಯಾ ಕ್ರಾಸ್ತಾ ಧನ್ಯವಾದಗಳನ್ನು ಅರ್ಪಿಸಿದರು.


ವಿಸ್ವ ದಾಖಾಲೆ ಬರೆದ ಸಂವೇದನೆಯ ನರ್ತಕಿ ರೆಮೋನಾ ಅವರ ಶಕ್ತಿಯುತ ತಂಡ ಹಾರಿಜಾನ್ನೊಂದಿಗೆ ಯೇಸುವಿನ ಜನನದ ಅದ್ಭುತ ಕಥೆಯನ್ನು ಪ್ರಸ್ತುತಪಡಿಸಿದರು, ರೆಮೋನಾ ಅವರ ಸಾಧನೆಗಾಗಿ ಅಪಾರ ಸಂತೋಷದಿಂದ ಅವರನ್ನು ಗೌರವಿಸಲಾಯಿತು. ಸಂಗೀತ ನಿರ್ದೇಶಕ ಸಂಜಯ್ ರೊಡ್ರಿಗಸ್ ಅವರ ನಿರ್ದೇಶನದಲ್ಲಿ ಪ್ರಸಿದ್ಧ ಗಾಯಕರೊಂದಿಗೆ ಅತ್ಯಂತ ಸುಮಧುರ ಸಂಜೆ ಆನಂದಿಸಲು ಸಾಧ್ಯವಾಯಿತು. ಸಂಭ್ರಮದ ಸಂಜೆ ಕ್ಯಾರೋಲ್ಗಳಿಂದ ಪುಳಕಿತಗೊಂಡಿತ್ತು.
GG100 ಕೋರಸ್ ತಂಡ ಪ್ರಸ್ತುತಪಡಿಸಿದ ಸ್ಟ್ಯಾನಿ ಬೇಳಾ ಅವರ ಸಮರ್ಥ ನಾಯಕತ್ವದಲ್ಲಿ ಅರ್ಬನ್ ಗೋವ್ ನಾತ್ಯ ತಂಡದಿಂದ ಸೂಕ್ತವಾದ ನೃತ್ಯಗಳು ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಸಂಗೀತೋತ್ಸವವನ್ನು ಶಾಂತಿ ಪ್ರಿಯಾ ಲಸ್ರಾದೊ ಅವರು ನಿರೂಪಿಸಿದರು.



ಶ್ರೀ ಜಿಯೋ ಡಿ’ಸಿಲ್ವಾ ಅವರು ಉತ್ತಮವಾಗಿ ಇಡೀ ಕಾರ್ಯಕ್ರಮವನ್ನು ನಿರ್ವಹಿಸಿ ಮತ್ತು ನಿರೂಪಿಸಿದರು. ಆಚರಣೆಯು ಎಲ್ಲರಿಗೂ ಪ್ರೀತಿಯ ಸಂದೇಶ, ಸವಿ ನೆನಪುಗಳ ಸುರಿಮಳೆ ಮತ್ತು ರುಚಿಯಾದ ಕ್ರಿಸ್ಮಸ್ ಭೋಜನ ನೀಡಿದಾಗ ಸಂಭ್ರಮದ ಮೆರುಗು ದ್ವಿಗುಣಾವಾಯಿತು. ಈ ಕಾರ್ಯಕ್ರಮಕ್ಕೆ ಬೃಹತ್ ಜನಸಮೂಹ ಸಾಕ್ಷಿಯಾಯಿತು.
