ದಟ್ಟ ಕಾಡು- ಕಠಿನ ಹಾದಿಯಲ್ಲಿ ಬರಿಗಾಲ ಭಕ್ತರು- ಕರಿಮಲೆ ಹಾದಿ ಹೇಳುವ ʻರಹಸ್ಯ!ʼ ತಿಳಿಯಿರಿ!

ಕಲ್ಲು–ಮುಳ್ಳುಗಳಿಂದ ತುಂಬಿದ ಕಠಿಣ ಹಾದಿ… ನಡುಕಾಡಿನ ಮಧ್ಯೆ ಹರಿಯುವ ಹೊಳೆ… ದೊಡ್ಡ ಮರಗಳ ಹಿಂದೊಮ್ಮೆ ಘೀಳಿಡುವ ಆನೆಗಳು… ಗವ್ವೆನ್ನುವ ಕತ್ತಲು…. ಹೀಗೆ ಎಲ್ಲವನ್ನು ತನ್ನೊಳಗೆ ಬಚ್ಚಿಟ್ಟಿರುವ ʻಕರಿಮಲʼ ಮೂಲಕ ಅಯ್ಯಪ್ಪನ ದರ್ಶನಕ್ಕೆ ಬರುವ ಸಾವಿರಾರು ಯಾತ್ರಿಕರು ಭಕ್ತಿ ಮತ್ತು ಧೈರ್ಯಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ವಾಹನದಲ್ಲಿ ಪಂಪಾವನ್ನು ತಲುಪಬಹುದು. ಆದರೆ ನೈಸರ್ಗಿಕ ಕಾಡು ಕರಿಮಲ ಹಾದಿಯಲ್ಲಿ ಸಾವಿರಾರು ಪಾದಯಾತ್ರಿಕರು ಅಯ್ಯಪ್ಪ ದರ್ಶನಕ್ಕೆ ತೆರಳುತ್ತಾರೆ. ಅವರ ಕಾಲುಗಳು ಮಣ್ಣನ್ನು ತಾಗುವ ಪ್ರತಿ ಕ್ಷಣವನ್ನೂ ಆನಂದಿಸಿ, ಇದು ಯಾತ್ರೆಗಿಂತ ಹೆಚ್ಚಾದ ಮನಸ್ಸಿನ ಶುದ್ಧೀಕರಣ ಎಂದು ಭಾವಿಸುತ್ತಾರೆ.

ಹಾದಿಯ ಆರಂಭದಲ್ಲೇ ಕಾಡಿನ ಹೊಳೆ ತನ್ನ ಝುಳು ಝುಳು ನಾದದಿಂದ ಯಾತ್ರಿಕರನ್ನು ಸ್ವಾಗತಿಸುತ್ತದೆ. ಕಲ್ಲುಗಳಿಂದ ತುಂಬಿದ ಕಮರಿಗಳನ್ನು ದಾಟುತ್ತಾ, ಕೆಲವೊಮ್ಮೆ ಎದುರಾಗುವ ಆನೆಗಳ ಹಿಂಡನ್ನು ಅಭಿಮಾನದಿಂದ ದೂರದಲ್ಲೇ ನೋಡುತ್ತಾ, ಯಾತ್ರಿಕರು ಕಾಡಿನ ನಿಶಬ್ದವನ್ನು ಅನುಭವಿಸುತ್ತಾರೆ.

Azhutha Shiva Temple, Erumeli

ಯಾತ್ರೆಯ ಒಂದು ಮುಖ್ಯ ಅಂಶವೇ ಮಹಿಷಿ ನಿಗ್ರಹದ ನೆನಪು. ಮಣಿಕಂಠ ಸ್ವಾಮಿಗೆ ಮೀಸಲಾಗಿರುವ ಈ ಪುರಾತನ ಕತೆ, ಅಯ್ಯಪ್ಪನ ಕಾಲ್ನಡಿಗೆ ಯಾತ್ರೆಗೂ ಜೀವ ತುಂಬುತ್ತದೆ. ಪೆಟ್ಟತುಲ್ಲಿ ಎರುಮೇಲಿವರೆಗೆ ನಡೆಯುವುದು ಕೇವಲ ಕಾಲ್ನಡಿಗೆಯಲ್ಲ, ಅದು ಭಕ್ತರೊಳಗಿನ ದೈವಸ್ಮರಣೆಯ ಪ್ರತಿಯೊಂದು ನೆನಪೂ ಆಗುತ್ತದೆ.

Kallidam Kunnu

ಅಝುತ ಹರಿಯುವ ಹೊಳೆಯಲ್ಲಿ ಕಾಲು ನೆನೆಸಿಕೊಂಡು, ಯಾತ್ರಿಕರು ಕಲ್ಲುಗಳನ್ನು ತೆಗೆದುಕೊಂಡು ಕಲ್ಲಿಥಮ್ ಬೆಟ್ಟದ ಕಡೆಗೆ ಪರ್ವತಾರೋಹಣ ಆರಂಭಿಸುತ್ತಾರೆ. ವರ್ಷಗಳ ಕಾಲ ಲಕ್ಷಾಂತರ ಯಾತ್ರಿಕರು ತಂದ ಕಲ್ಲುಗಳು ಈಗ ಒಂದು ದೊಡ್ಡ ಪರ್ವತದ ರೂಪ ಧರಿಸಿವೆ. ಇದು ಭಕ್ತಿಯು ಕಲ್ಲಿನ ಮೇಲೆ ಕಟ್ಟಿದ ಸ್ಮಾರಕ.

Kariyilam Thodu

ಕಠಿಣ ಹಾದಿ, ಕಲ್ಲು, ಹಳ್ಳ, ವೃಕ್ಷ—ಇವೆಲ್ಲದರ ನಡುವೆ 20 ರೂ.ಗೆ ಸಿಗುವ ಊರುಗೋಲು ಯಾತ್ರಿಕರಿಗೆ ಆಧಾರ. ಮಜ್ಜಿಗೆ, ನಿಂಬೆ ನೀರು, ಉಪ್ಪು ಸೋಡಾ ಮಾರುವ ಚಿಕ್ಕ ಅಂಗಡಿಗಳು ದೈವದ ಕೃಪೆಯಂತೆಯೇ ಕಾಣಿಸುತ್ತವೆ. ಮಧ್ಯಾಹ್ನದ ನಂತರ ಕಾಡು ಪ್ರಾಣಿಗಳ ಭಯದಿಂದ ಅಂಗಡಿಗಳು ಮುಚ್ಚಿ, ಉಳಿದ ವಸ್ತುಗಳನ್ನು ಬುಟ್ಟಿಗಳಲ್ಲಿ ತುಂಬಿ ಮರಗಳ ಮೇಲೆ ನೇತುಹಾಕಿ ಕಾಡು ಪ್ರಾಣಿಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಯಾಕೆಂದರೆ ಅವುಗಳು ಆ ಸಮಯದಲ್ಲಿ ಹೆಚ್ಚಾಗಿ ಓಡಾಡುತ್ತದೆ.

Azhutha Kadavu (River)

ಮಧ್ಯದಲ್ಲಿ ಕಾಣುವ ಅದ್ಭುತ ಚೀನೀ ಮರ, ಯಾತ್ರಿಕರಿಗೆ ಒಂದು ನಿಸರ್ಗದ ಸುಂದರ ನಿಲ್ದಾಣ. ಅದರ ಇನ್ನೊಂದು ಅಂಚಿನ ಹಿಂದೆ ಆನೆ ನಿಂತರೂ ಕಾಣದಷ್ಟು ವಿಶಾಲ. ಯಾತ್ರಿಕರು ಮರದ ಕೆಳಗೆ ಫೋಟೋ ತೆಗೆಯದೇ ಮುಂದೆ ಸಾಗುವುದೇ ಕಡಿಮೆ.

Inchippara Kotta

ಅರಣ್ಯ ಗಾಳಿಯ ಮೃದುವಾದ ಸ್ಪರ್ಶ, ಪಕ್ಷಿಗಳ ಕೂಗು, ದೂರದಲ್ಲಿ ಕೇಳಿಬರುವ ಕಾಡು ಆನೆಗಳ ಘೀಳು ಇವುಗಳ ಮಧ್ಯೆ ಕರಿಲಮ್ಥೋಟಿಲ್ ಯಾತ್ರಿಕರ ಸುಸ್ತನ್ನು ಹೀರಿಕೊಳ್ಳುವ ಚಿಕ್ಕ ಸ್ವರ್ಗದಂತೆ ಕಾಣುತ್ತದೆ.

appachimedu

ಎಲ್ಲದಕ್ಕಿಂತ ಕಷ್ಟಕರವಾಗಿರುವುದು ಕರಿಮಲದ 8 ಮೆಟ್ಟಿಲುಗಳು, ಇದು ಯಾತ್ರೆಯ ನೈಜ ಸತ್ವ ಪರೀಕ್ಷೆ. ಆದರೆ ತುದಿಯಲ್ಲಿ ಕಾಣುವ ಕರಿಮಲ ನಾಥನ ಪ್ರತಿಮೆ, ಆಗ ಯಾತ್ರಿಕನಿಗೆ ಮರುಜನ್ಮ ಪಡೆದಂತೆ ಅನಿಸುತ್ತದೆ. ಪರ್ವತ ಇಳಿಯುವಾಗ ಜಾಗೃತೆಯಿಂದ ನಡೆಯುತ್ತಾ, ಕೊನೆಗೆ ವಲಿಯನವತ್ತಂ ತಲುಪಿದಾಗ ಪಂಪಾ ದೂರದಲ್ಲಿ ಕಣ್ಣಿಗೆ ಬೀಳುತ್ತದೆ—ಅಯ್ಯಪ್ಪನ ದರ್ಶನದತ್ತ ಹತ್ತಿರವಾಗುತ್ತಿರುವ ಸಂತಸದ ನಿಟ್ಟುಸಿರು ಬಿಡುತ್ತಾರೆ ಯಾತ್ರಿಕರು.

error: Content is protected !!