ಹದಿನೈದು ದಿನಗಳಲ್ಲಿ ಎಲ್ಲವೂ ಸುಖಾಂತ್ಯ- ಬಿಎಂಆರ್‌ ಗ್ರೂಪ್‌ ನಂಬಿಕೆಗೆ ಅರ್ಹ: ಆಡಳಿತ ಮಂಡಳಿ ಸ್ಪಷ್ಟೀಕರಣ

ಮಂಗಳೂರು: ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಿಎಂಆರ್ ಗ್ರೂಪ್‌ ಅತ್ಯಂತ ಹಳೆಯ ಗ್ರೂಪ್‌ ಆಗಿದ್ದು, ಗ್ರಾಹಕರ ನಂಬಿಕೆ ಉಳಿಸುವ ಕಾರ್ಯ ಮಾಡಲಿದೆ. ಕೇವಲ ಹದಿನೈದು ದಿನಗಳಲ್ಲಿ ಎಲ್ಲವೂ ಸುಖಾಂತ್ಯವಾಗಲಿದ್ದು ಗ್ರಾಹಕರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಬಿಎಂಆರ್ ಗ್ರೂಪ್‌ನ ದಾವೂದ್ ಹಕೀಮ್ ಸ್ಪಷ್ಟೀಕರಣ ನೀಡಿದ್ದಾರೆ.

ಇಂದು ಬೆಳಿಗ್ಗೆ ವದಂತಿ ಹಬ್ಬಿದ್ದರಿಂದ ಗ್ರಾಹಕರು ಬಿಎಂಆರ್ ಗ್ರೂಪ್ ಕಚೇರಿಗೆ ಬಂದಿದ್ದಾರೆ. ಆದರೆ 20 ಕೋಟಿ ಹಣದಲ್ಲಿ 3 ಕೋಟಿ ಅಷ್ಟೇ ಬಾಕಿ ಇದ್ದು, ಗ್ರಾಹಕರ ಹಣ ಸಕಾಲದಲ್ಲಿ ಕೈ ಸೇರಲಿದೆ. ಈ ಹಿಂದೆ ಇತರ ಲಕ್ಕಿ ಸ್ಕೀಂಗಳು ಬಾಗಿಲು ಹಾಕಿದ್ದರಿಂದ ಗೊಂದಲಗೊಂಡ ಗ್ರಾಹಕರು ಈ ಗ್ರೂಪ್‌ ಕೂಡಾ ಬಾಗಿಲು ಹಾಕುತ್ತದೆ ಎಂಬ ರೂಮರ್‌ ಹಬ್ಬಿದ್ದರಿಂದ ಗ್ರಾಹಕರು ಕಚೇರಿಗೆ ಬಂದಿದ್ದರು. ಆದರೆ ಅವರಿಗೆ ಸಮಜಾಯಿಷಿ ನೀಡಲಾಗಿದ್ದು, ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹಕೀಂ ಸ್ಪಷ್ಟಪಡಿಸಿದ್ದಾರೆ.

ಬಿಎಂಆರ್‌ ಗ್ರೂಪ್‌ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಗ್ರೂಪ್‌ ಆಗಿದೆ. ಅಷ್ಟು ವರ್ಷಗಳ ಸೇವೆಯಲ್ಲಿ ಒಮ್ಮೆಯೂ ಗ್ರಾಹರಿಗೆ ಅನ್ಯಾಯವಾಗಿಲ್ಲ. ಮುಂದೆಯೂ ಆಗಲು ಸಾಧ್ಯವಿಲ್ಲ. ಸ್ಕೀಂ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಗ್ರಾಹಕರಿಗೆ ಹಣ ಕೈ ಸೇರಲಿದ್ದು, ಆತಂಕ ಪಡುವ ಅಗತ್ಯವೇ ಇಲ್ಲ. ಈ ಬಗ್ಗೆ ಪೊಲೀಸರಿಗೂ ಸ್ಪಷ್ಟಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಕೊಡಬೇಡಿ. ಯಾವುದೇ ಆತಂಕ, ಅನುಮಾನವಿದ್ದರೂ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವಂತೆ ಹಕೀಂ ಅವರು ವಾಯ್ಸ್‌ ಆಫ್‌ ಪಬ್ಲಿಕ್‌ ಜೊತೆ ಮಾತಾಡಿ ಸ್ಪಷ್ಟಪಡಿಸಿದ್ದಾರೆ.

error: Content is protected !!