ಕೊಡಗು: ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಹೇರೂರು ಸಮೀಪದ ಹಾರಂಗಿಯಲ್ಲಿ ಬುಧವಾರ(ನ.12) ಮಧ್ಯಾಹ್ನ ನಡೆದಿದೆ.

ಮಡಿಕೇರಿ ಕಾಲೇಜ್ ವೊಂದರ ವಿದ್ಯಾರ್ಥಿಗಳಾಗಿರುವ ಚಂಗಪ್ಪ (19) ಮತ್ತು ತರುಣ್ ತಿಮ್ಮಯ್ಯ ಮೃತ ವಿದ್ಯಾರ್ಥಿಗಳು.
ಒಟ್ಟು ಮೂವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ನಂತರ ಮೇಲಕ್ಕೆ ಬರಲಾಗದೇ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ.