ಮಂಗಳೂರು: ಫಳ್ನೀರ್ ರಸ್ತೆಯಲ್ಲಿರುವ ಆಸ್ಪತ್ರೆಯ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಸಂಗತಿ ಬೆಳಕಿಗೆ ಬಂದಿದ್ದು, ಪ್ರದೀಪ್ ಆಚಾರ್ಯ ಅವರು ಕದ್ರಿ ಠಾಣೆ ಪೊಲೀಸರಿಗೆ ಈ ಸಂಬಂಧಿ ದೂರು ನೀಡಿದ್ದಾರೆ.
ಪ್ರದೀಪ್ ಆಚಾರ್ಯ ರಾತ್ರಿ 7.10ಕ್ಕೆ ತಮ್ಮ ಬೈಕನ್ನು ಆಸ್ಪತ್ರೆ ಸಮೀಪ ನಿಲ್ಲಿಸಿ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಚಿಕ್ಕಪ್ಪನನ್ನು ನೋಡಲು ಹೋಗಿದ್ದರು. ಸುಮಾರು 9 ಗಂಟೆಗೆ ಅವರು ಹಿಂತಿರುಗಿ ಬಂದಾಗ, ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ.

ಈ ವೇಳೆ ಪ್ರದೀಪ್ ಆಚಾರ್ಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬೈಕ್ ಹುಡುಕಿದರೂ, ಅದು ಪತ್ತೆಯಾಗಿಲ್ಲ. ಕಳವುಗೊಂಡ ಬೈಕಿನ ಮೌಲ್ಯ ಸುಮಾರು 45,000 ರೂಪಾಯಿ ಇದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.