‘ಮಾರ್ನೆಮಿ ಗೌಜಿ’ ವಿಚಾರ ಸಂವಾದದಲ್ಲಿ ಸಂಸ್ಕೃತಿ ಸಂರಕ್ಷಣೆಯ ಚಿಂತನೆ

ಮಂಗಳೂರು: ತುಳುನಾಡನ್ನು ಒಳಗೊಂಡಂತೆ ನಮ್ಮ ರಾಷ್ಟ್ರದಲ್ಲಿ ಶಕ್ತಿ ಆರಾಧನೆಗೆ ವಿಶೇಷವಾದ ಮಹತ್ವವಿದೆ. ಸ್ತ್ರೀ ಸ್ವರೂಪಗಳಾದ ಸರಸ್ವತಿ, ಲಕ್ಷ್ಮೀ, ಗೌರಿ ನಾಮದಲ್ಲಿ ಮಾತೃ ಶಕ್ತಿಯನ್ನು ಆರಾಧಿಸುವ ಪರಂಪರೆ ಬೆಳೆದು ಬಂದಿದೆ. ದುರ್ಗಾ ದೇವಿಯನ್ನು ಒಂಬತ್ತು ರೂಪಗಳಲ್ಲಿ ಆರಾಧಿಸಿ ಹತ್ತನೇ ದಿನವನ್ನು ವಿಜಯದ ಸಂಕೇತವಾಗಿ ವಿಜಯ ದಶಮಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸಾಹಿತಿ ಸುಧಾ ನಾಗೇಶ್ ನುಡಿದರು. ಅವರು ತುಳು ಪರಿಷತ್ ನ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಮಾರ್ನೆಮಿದ ಗೌಜಿ ವಿಚಾರ ಚಿಂತನೆಯಲ್ಲಿ ಮಾತನಾಡುತ್ತಿದ್ದರು.

ತುಳುನಾಡಿನಲ್ಲಿ ಮಾರ್ನೆಮಿ ಹಬ್ಬದಲ್ಲಿ ಹರಕೆ ರೂಪದಲ್ಲಿ ವೇಷ ಧರಿಸುವ ಪರಂಪರೆಯಿದ್ದು ಇಂದು ಅದು ಅರ್ಥವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಪ್ರಕೃತಿ ಶಕ್ತಿಯ ಆರಾಧನೆಯ ಮೂಲಕ ನವಶಕ್ತಿಯನ್ನು ಗಳಿಸಲು ಪ್ರಯತ್ನ ಮಾಡಬೇಕು ಎಂದರು. ತುಳು ಪರಿಷತ್ ನ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿ ಹಬ್ಬಗಳ ಹಿನ್ನೆಲೆಯಲ್ಲಿರುವ ಅರ್ಥವನ್ನು ಅರಿತು ಹಬ್ಬಗಳ ಆಚರಣೆ ಮಾಡಬೇಕು ಎಂದರು.

ಪರಿಷತ್ ನ ಗೌರವ ಅಧ್ಯಕ್ಷ ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಮಾತನಾಡಿ ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ನಮ್ಮ ನಾಡಿನ ಆಚರಣೆಗಳಿಗೆ ಅನನ್ಯತೆವಿದ್ದು ಮೂಲ ತತ್ವಗಳನ್ನು ಉಳಿಸಿಕೊಳ್ಳಬೇಕು ಎಂದರು.

ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸ್ವಾಗತಿಸಿದರು.

ಮಾಲತಿ ಶೆಟ್ಟಿ, ಶ್ರೀನಿವಾಸ ಬಿ., ಶಾರದಾ ಬಾರ್ಕುರು, ಶಾಲಿನಿ ರೈ ಸುಮತಿ ಹೆಗ್ಡೆ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!