ಮಂಗಳೂರು: ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು ದ.ಕ.ಜಿಲ್ಲೆ ಮಂಗಳೂರುರವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ-1, ಮತ್ತು ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕರು ಮತ್ತು ಮಂಗಳೂರು ದಕ್ಷಿಣ ವಲಯ -1 ರ ಅಬಕಾರಿ ನಿರೀಕ್ಷಕರವರ ನೇತೃತ್ವದಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರು-1 ರವರು ಸಿಬ್ಬಂದಿಗಳೊಂದಿಗೆ ಇಂದು ಮಂಗಳೂರು ದಕ್ಷಿಣ ವಲಯ-1 ವ್ಯಾಪ್ತಿಯ, ಕದ್ರಿ, ಲೋಬೊ ಲೇನ್, ಎಂಬಲ್ಲಿ ಮೈಕಲ್, ಬ್ಲೈಸ್ ಮಿನೀಜಸ್ ಎಂಬವನ ಮನೆಯ ಮೇಲೆ ದಾಳಿ ಮಾಡಲಾಗಿ ಆರೋಪಿಯ ಮನೆಯಲ್ಲಿ
1) ನಕಲಿ ವೈನ್ – 238.500 ಲೀಟರ್
2) ವೈನ್ ತಯಾರಿಸುವ ಕೊಳೆ – 1,500 ಲೀಟರ್
3) ಮದ್ಯ – 3.180 ಲೀಟರ್
4) ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ಜಪ್ತುಪಡಿಸಿಕೊಂಡಿದ್ದು ಸದರಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 13(1)(a), 13(1)(f), 14,15,32(1),32(2),(e), 34,38(A) ರಂತೆ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಮಂಗಳೂರು ದಕ್ಷಿಣ ವಲಯ -1 ಕಚೇರಿಯ ಅಬಕಾರಿ ಉಪ ನಿರೀಕ್ಷಕರಾದ ಹರೀಶ್ ಪಿ. ಇವರು ಘೋರ ಮೊಖದ್ದಮೆಯನ್ನು ದಾಖಲಿಸಿರುತಾರೆ. ಸದ್ರಿ ಸೊತ್ತಿನ ನ ಒಟ್ಟು ಅಂದಾಜು ಮೌಲ್ಯ ರೂ. 5,57,690/- ಅಗಿರುತ್ತದೆ.