7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸುಳ್ಯ: 2018ರಲ್ಲಿ ದಾಖಲಾದ ಪ್ರಕರಣದಲ್ಲಿ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರು ವಶಕ್ಕೆ ಸಿಕ್ಕಿದ್ದಾನೆ.

ಸುಳ್ಯ ಪೊಲೀಸ್ ಠಾಣಾ ಕ್ರಿ.ಸಂ.115/2018ರಡಿ ಐಪಿಸಿ ಕಲಂ 504, 354(ಎ) ಪ್ರಕರಣದಲ್ಲಿ ಆರೋಪಿ ರವೀಂದ್ರ ಬಿ.ಎನ್. (40) ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದರಿಂದಾಗಿ ಎಲ್‌ಪಿಸಿ ನಂ.04/2023ರಂತೆ ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿತ್ತು.

ಪೊಲೀಸರು ಸೆಪ್ಟೆಂಬರ್ 7, 2025 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇದಾವತಿ ನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

error: Content is protected !!