ಚೌತಿ ಸ್ಪೆಷಲ್ ಸ್ಟೋರಿ!!! ಜಪಾನ್ ದೇಶವನ್ನು ಇಂದಿಗೂ ಭೂಂಕಂಪಗಳಿಂದ ರಕ್ಷಿಸುತ್ತಿರುವ ಗಣಪ!

Special Story: ಭಾರತದಲ್ಲಿ ಗಣೇಶ ಚತುರ್ಥಿ ವಿಜ್ರಂಭಣೆಯಿಂದ ನಡೆಯುತ್ತಿದೆ. ಆದರೆ ದೂರದ ಜಪಾನಿನಲ್ಲೂ ಗಣಪತಿ ಅವರ ಅಧಿದೇವರು. ಬೌದ್ಧ ಮತವನ್ನು ಪಾಲಿಸುತ್ತಿರುವ ಜಪಾನಿಗರು ಗಣಪನನ್ನು ಆರಾಧ್ಯದೇವರನ್ನಾಗಿ ಮಾಡಿದ್ದಾರೆ‌. ಇದೇ ಗಣಪ ಜಪಾನ್ ದೇಶವನ್ನು ಭೂಕಂಗಳಿಂದ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ.

ಜಪಾನಿಗರು ಇಂದಿಗೂ ನಿರಂತರವಾಗಿ ಪೂಜಿಸಿಕೊಂಡು ಬರುತ್ತಿರುವ ಗಣಪತಿ ದೇವಸ್ಥಾನ….!

ಈ ಮಹಾಗಣಪತಿ ಎಷ್ಟು ಶಕ್ತಿಶಾಲಿ ಎಂದರೆ ಇಂದು ಜಪಾನ್ ಶರವೇಗದಲ್ಲಿ ಮುಂದುವರಿಯಲಿ ಇದೇ ಗಣಪತಿಯ ಕೃಪೆ ಎಂದುಕೊಂಡಿದ್ದಾರೆ ಜಪಾನಿಗರು. ದೇಶ ಚಂಡಮಾರುತ, ಭೂಕಂಪಕ್ಕೆ ತತ್ತರಿಸಿದಾಗ ಜಪಾನಿಗರು ಗಣಪತಿ ದೇವರ ಮೊರೆ ಹೋಗುತ್ತಾರೆ. ಗಣಪತಿ ಇವರ ಕಷ್ಟವನ್ನು ಶಮನಗೊಳಿಸುತ್ತಾನೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ಒಂದು ಉದಾಹರಣೆ ನೀಡಬೇಕಾದರೆ, 1990ರಲ್ಲಿ ಜಪಾನಿನ ಆರ್ಥಿಕ ಶಕ್ತಿಗೆ ತೀವ್ರ ಹೊಡೆತ ಬಿದ್ದು ಜಪಾನ್ ಅಕ್ಷರಶಃ ತತ್ತರಿಸಿಹೋಗಿತ್ತು. ಈ ವೇಳೆ ಜಪಾನಿಗರು ಮೊರೆಹೋಗಿದ್ದು ಗಣೇಶನಿಗೆ….!

ಗಣಪತಿ ದೇವರಿಗೆ ಮೂಲಂಗಿಯನ್ನು ಸಮರ್ಪಿಸಿ ತನ್ನ ಕಷ್ಟ ನಿವಾರಣೆಯಾಗುವಂತೆ ಪ್ರಾರ್ಥಿಸಿದರಂತೆ.. ಅಚ್ಚರಿಯೆಂಬಂತೆ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಜಪಾನ್ ಮತ್ತೆ ಆರ್ಥಿಕ ಪುನಷ್ಚೇತನ ಪಡೆಯಿತಂತೆ. ಗಣಪತಿ ದೇವರ ಮಹಿಮೆಯನ್ನು ಅರಿತುಕೊಂಡ ಜಪಾನಿಗರು ಭಾರತಕ್ಕೆ ಬಂದಾಗ ಗಣಪತಿ ಸನ್ನಿಧಾನಕ್ಕೆ ತೆರಳಿ ದರುಶನ ನೀಡಿ ಬರುತ್ತಾರೆ.

ಹಾಗೆ ನೋಡಿದರೆ ಜಪಾನ್‍ನಲ್ಲಿರುವುದು ಬೌದ್ಧ ಧರ್ಮ. ಬೌದ್ಧ ಧರ್ಮ ಅಸ್ತಿತ್ವದಲ್ಲಿರುವ ಮುನ್ನ ಜಪಾನ್‍ನಲ್ಲಿದ್ದುದು ಹಿಂದೂ ಧರ್ಮ. ಬೌದ್ಧ ಭಿಕ್ಕುಗಳು ಭೌದ್ಧಧರ್ಮವನ್ನು ಪ್ರಚಾರ ಮಾಡಿದ ಸಲುವಾಗಿ ಚೀನಾ, ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಬೌದ್ಧಧರ್ಮ ಅಸ್ತಿತ್ವಕ್ಕೆ ಬಂದಿತು. ಅಂದಹಾಗೆ ಜಪಾನ್‍ನಲ್ಲಿ ಗಣಪತಿ ದೇವರಷ್ಟೇ ಅಲ್ಲ, ಇತರ ದೇವತೆಗಳೂ ಇದ್ದಾರೆ. ಆದರೆ ವಿಚಿತ್ರವೆಂದರೆ ಹಿಂದೂ ದೇವರೆಲ್ಲಾ ಹೆಸರು ಬದಲಿಸಿಕೊಂಡು ಬೌದ್ಧ ಹೆಸರುಗಳನ್ನು ಪಡೆದುಕೊಂಡಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಜಪಾನಿನಲ್ಲಿರುವ ಗಣಪತಿಯ ಇಂದಿನ ಹೆಸರು ಕಂಗಿತೆನ್. ಇದರ ಜೊತೆಗೆ ವಿನಾಯಕ ತೆನ್, ಬಿನಾಯಕ ತೆನ್ ಹೆಸರಲ್ಲೂ ಗಣಪತಿ ಕರೆಸಿಕೊಳ್ಳುತ್ತಾನೆ. ನಮ್ಮ ಗಣಪತಿ ಮೋದಕಪ್ರಿಯನಾದರೆ ಕಂಗಿತೆನ್ ಮೂಲಂಗಿಪ್ರಿಯ. ಆರಂಭದಲ್ಲಿ ಮೋದಕಪ್ರಿಯನಾಗಿದ್ದ ಗಣಪತಿಯನ್ನು ಜಪಾನಿಗರು ಇಚ್ಛಾನುಸಾರ ಮೂಲಂಗಿಪ್ರಿಯನಾಗಿ ಮಾಡಿದರು. ಅದರಂತೆ ನಮ್ಮಲ್ಲಿ ದೇವಳದ ಎದುರು ಹಣ್ಣುಕಾಯಿ ಮಾರುವಂತೆ ಕಂಗಿತೆನ್ ದೇಗುಲದ ಮುಂದೆ ಮೂಲಂಗಿ ಮಾರುವುದನ್ನು ಕಾಣಬಹುದು.

ಗಣಪತಿ ದೇವರಂತೆ ಇತರ ಶಕ್ತಿದೇವತೆಗಳೂ ಇಲ್ಲಿವೆ. ಬೌದ್ಧ ಧರ್ಮದ ಅನುಸಾರ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ ಉದಾರಣೆಗೆ ನಮ್ಮ ಶಿವ ದೇವರು ದೈಜೈತೆನ್ ಆಗಿ, ಬ್ರಹ್ಮ ದೇವರು ಬೊಂತೆನ್ ಆಗಿ, ಇಂದ್ರ ದೇವರು ತೈಶಾಕುತೆನ್ ಆಗಿ, ವರುಣ ದೇವರು ರೈಜಿನ್ ಆಗಿ, ಯಮ ದೇವರು ಎನ್ಮತೆನ್ ಆಗಿ, ಲಕ್ಷ್ಮೀ ದೇವರು ಕಿಚಿಜೊತೆನ್ ಆಗಿ, ಸರಸ್ವತಿ ದೇವರು ಬೆಂಜೈತೆನ್ ಆಗಿ ಹಸರು ಬದಲಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಭಾರತದಲ್ಲಿ ಹೆಚ್ಚಾಗಿ ಪೂಜಿಸದ ಇಂದ್ರ, ವರುಣ, ಬ್ರಹ್ಮ ದೇವರನ್ನು ಜಪಾನಿನಲ್ಲಿ ಪೂಜಿಸಲಾಗುತ್ತಿದೆ. ಇದರಿಂದಾಗಿ ಜಪಾನ್ ವೇದಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಲಕ್ಷ್ಮಿ, ಗಣಪತಿ ಹಾಗೂ ಸರಸ್ವತಿಯ ವಿಗ್ರಹಗಳನ್ನು ಒಟ್ಟಾಗಿ ಕೆತ್ತಲಾಗಿದೆ.

ಟೊಕಿಯೊದಲ್ಲಿ ಮತ್ಸೊಚಿಯಾಮಾ ಎಂಬ ಗಣೇಶ ದೇವಾಲಯವಿದ್ದು ಇದು ಅತ್ಯಂತ ಪ್ರಾಚೀನ ದೇಗುಲ ಎಂದು ಹೆಸರು ಪಡೆದಿದೆ. ಇದು ಸುಮಾರು 1603-1867ರ ಸಂದರ್ಭದಲ್ಲಿ ನಿರ್ಮಾಣಗೊಂಡಿತೋ ಅಥವಾ ಅದಕ್ಕಿಂತ ಮುಂಚೆಯೇ ಇತ್ತು ಎನ್ನುವವರೂ ಇದ್ದಾರೆ. ಜಪಾನಿನಲ್ಲಿ ಹಿಂದೂ ಧರ್ಮ ಉಚ್ರಾಯ ಸ್ಥಿತಿಯಲ್ಲಿದ್ದಾಗ ಈ ಎಲ್ಲಾ ದೇಗುಲಗಳು ಆರಂಭಗೊಂಡಿರಬಹುದು. ಆ ಬಳಿಕ ಬೌದ್ಧ ಧರ್ಮ ವ್ಯಾಪಿಸಿದ ಬಳಿಕ ಬುದ್ಧನ ಬೃಹತ್ ಮೂರ್ತಿಗಳನ್ನೊಳಗೊಂಡ ದೇಗುಲಗಳು ಆರಂಭಗೊಂಡವು. ಅದರ ಜೊತೆಗೆ ಗಣಪತಿಗೆ ಪೂಜೆ ಸಲ್ಲಿಸುವುದನ್ನೂ ಜಪಾನಿಯರು ನಿಲ್ಲಿಸಲಿಲ್ಲ.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನ್ ಅಣುಬಾಂಬ್ ದಾಳಿ ಸೇರಿ ಅನೇಕ ಅವಘಡಗಳಿಗೆ ತುತ್ತಾಗಿತ್ತು. ಈ ವೇಳೆ ಕಂಗಿತನ್ ದೇವರನ್ನು ಜಪಾನಿಗರು ಮಣ್ಣಿನೊಳಗಡೆ ಹುದುಗಿಸಿಟ್ಟು ರಕ್ಷಿಸಿದ್ದರಂತೆ. ಯುದ್ಧ ಮುಗಿದ ಬಳಿಕ ದೇವರನ್ನು ಮತ್ತೊಮ್ಮೆ ಪ್ರತಿಷ್ಠಾಪಿಸಲಾಯಿತು. ಎಲ್ಲಾ ಆತಂಕಗಳು ನಿವಾರಣೆಯಾಗುವಂತೆ ಜಪಾನಿಗರು ಗಣಪತಿಯ ಮೊರೆ ಹೋಗಿದ್ದರು. ಕಾಕತಾಳಿಯವೋ ಎಂಬಂತೆ ಜಪಾನ್ ಇಂದು ಪವರ್‍ಫುಲ್ ರಾಷ್ಟ್ರವಾಗಿದೆ.

ಕಂಗಿತನ್ ದೇವರ ಶಕ್ತಿ ಅಪಾರವಾಗಿದೆ. ಈ ಶಕ್ತಿಯನ್ನು ಭಕ್ತರಿಗೆ ತಡೆದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾರೂ ಕೂಡಾ ಇಂದಿಗೂ ಆ ದೇವರ ಮುಖವನ್ನು ನೋಡುವುದಿಲ್ಲ. ಯುದ್ಧಕಾಲದಲ್ಲಿ ಹುದುಗಿಸಿಟ್ಟ ದೇವರನ್ನು ಮತ್ತೆ ಮೇಲೆತ್ತಿ ಪ್ರತಿಷ್ಠಾಪಿಸಿದಾಗ ಅರ್ಚಕರು ದೇವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದು ಬಿಟ್ಟರೆ ಆ ಬಳಿಕ ಯಾರೂ ಕೂಡಾ ಆ ದೇವರ ಮುಖದರುಶನ ಮಾಡುವ ಧೈರ್ಯವನ್ನು ತೋರಲಿಲ್ಲ. ದೇವರನ್ನು ಪ್ರತಿಷ್ಠಾಪಿಸಿದ ಬಳಿಕ ಅದರ ಮುಖ ಕಾಣದಂತೆ ಗರ್ಭಗುಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇಂದು ಲಕ್ಷಾಂತರ ಮಂದಿ ಕಂಗಿತನ್ ದೇಗುಲದ ದರುಶನ ಮಾಡಿಕೊಂಡು ಪುನೀತರಾಗುತ್ತಾರೆ. ಭಾರತಕ್ಕೆ ಬರುವ ಜಪಾನಿಗರು ಭಾರತದ ಗಣೇಶನನ್ನೂ ಕಂಗಿತನ್ ಎಂದೇ ಸಂಬೋಧಿಸುತ್ತಾರೆ. ಭಾರತೀಯರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಜಪಾನಿಗರು ಅದಕ್ಕೆ ಕಾರಣ ಹಿಂದೂ ದೇವರೆಂದು ನಂಬಿದ್ದಾರೆ. ನಿಮಗೆ ನೆನಪಿದೆಯೋ ಇಲ್ಲವೋ ಮೊನ್ನೆ ಚೀನಾ ದೋಕಲಂ ವಿಚಾರದಲ್ಲಿ ಭಾರತದ ವಿರುದ್ಧ ಗುಟುರು ಹಾಕಿದಾಗ ಜಪಾನ್ ಭಾರತದ ಪರವಾಗಿ ಬೆಂಬಲ ಸೂಚಿಸಿತ್ತು. ಇದಕ್ಕೆ ಕಾರಣ ಯಾರು ಗೊತ್ತೇ? ಅದೇ ಗಣಪತಿದೇವರು ಅರ್ಥಾತ್ ಕಂಗಿತನ್…

ಜಪಾನ್‍ನಲ್ಲಿರುವ ಪ್ರಮುಖ ಹಿಂದೂ ದೇವರ ದೇವಸ್ಥಾನಗಳು ಎಲ್ಲೆಲ್ಲಿವೆ ಎಂದರೆ: ಟೋಕಿಯೋದಲ್ಲಿರುವ ಸರಸ್ವತಿ ಯೋಗೀಶ್ವರ ಜಿಂಜಾ, ಅಪ್ಸರಾ ಗೋಕುಲ್‍ಜೀ, ಒಸಕಾದ ಸರಸ್ವತಿ ದೇಗುಲ, ಕ್ಯೋಟೋದಲ್ಲಿರುವ ಭೂದೇವಿ, ಅಗ್ನಿ ದೇವಾಲಯ, ತಕಾಹತಾ ಫ್ಯೂಡೋ ದೇಗುಲ, ಗೋಕುಲ್‍ಜೀ ದೇಗುಲ ಇತ್ಯಾದಿಗಳಿವೆ. ಎಲ್ಲಾ ದೇಗುಲಗಳೂ ಭಾರತದ ದೇಗುಲಗಳಂತೆ ಇದ್ದು ಇಲ್ಲಿನ ರೀತಿಯೇ ಪೂಜೆ ನಡೆಯುತ್ತದೆ.

error: Content is protected !!