ಪಕ್ಷಿಕೆರೆ : ಪಂಜ- ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆ ದಿನಾಂಕ ಆಗಸ್ಟ್ 06ರಂದು ಬೆಳಿಗ್ಗೆ 10ಗಂಟೆಗೆ ಸಂಘದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧಿಕಾರಿಯವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಮಕ್ಕಳಿಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಶೆಟ್ಟಿ ನಲ್ಯಗುತ್ತು ವಹಿಸಿದರು. ಮುಖ್ಯ ಅತಿಥಿಯಾಗಿ ಡಾಕ್ಟರ್ ಪ್ರಶಾಂತ್ ಪಶು ವೈದ್ಯಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಮಂಗಳೂರು, ಯಶವಂತ್ ವಿಸ್ತರಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು., ಸಂಘದ ಉಪಾಧ್ಯಕ್ಷರಾದ ಸತೀಶ್ ಸತೀಶ್ .ಜೆ ಶೆಟ್ಟಿ. ನಿರ್ದೇಶಕರುಗಳಾದ ಬಾಲಕೃಷ್ಣದೇವಾಡಿಗ. ಚಂದ್ರಹಾಸ್ ಎಂ., ಶೆಟ್ಟಿ, ಸತೀಶ್ ಎಂ. ಶೆಟ್ಟಿ, ಹರೀಶ್ ಕುಮಾರ್, ರಾಜೇಶ್ ಶೆಟ್ಟಿ, ಮೀರಾ ಉಷಾ, ವೇದಾವತಿ, ರೇಷ್ಮಾ, ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಮಾಜಿ ಕಾರ್ಯದರ್ಶಿಯಾದ ಗಣೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ನಿರ್ದೇಶಕರಾದ ಸತೀಶ್ ಎಂ ಶೆಟ್ಟಿ ಸ್ವಾಗತಿಸಿದರು, ಸಂಘದ ಕಾರ್ಯದರ್ಶಿಯಾದ ಜಗದೀಶ್ ಶೆಟ್ಟಿ ವರದಿ ವಾಚಿಸಿದರು ಅಮಿತಾ ದೇವಾಡಿಗ ವಂದಿಸಿದರು.