ಬಿಲ್‌ ಬಾಕಿ ವಿಚಾರದಲ್ಲಿ ʻಕಿರಿಕ್‌ʼ: ಬಾವಾ ಮೇಲೆ ಕೇಸ್!‌

ಸುರತ್ಕಲ್:‌ ಕಾಮಗಾರಿ ಬಿಲ್‌ ಬಾಕಿಯಿಟ್ಟಿದ್ದನ್ನು ಪ್ರಶ್ನಿಸಲು ಎನ್.ಎಂ.ಪಿ.ಎ. ಕಚೇರಿಗೆ ಹೋಗಿದ್ದ ವೇಳೆ ಮಾಜಿ ಶಾಸಕ ಮೊಯಿದೀನ್‌ ಬಾವಾ ಮತ್ತವರ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಪಣಂಬೂರಿನ ಎನ್.ಎಂ.ಪಿ.ಎ. ಕಾರ್ಯದರ್ಶಿ ಈ ಸಂಬಂಧ ದೂರು ನೀಡಿದ್ದಾರೆ.
ಜೂ.9ರ ರಾತ್ರಿ 8 ಗಂಟೆ ಸುಮಾರಿಗೆ ಮೊಯಿದೀನ್ ಬಾವಾ ಮತ್ತು ಅವರ ಇಬ್ಬರು ಬೆಂಬಲಿಗರು ಕಾಮಗಾರಿಯ ಬಿಲ್ ಮಂಜೂರಾತಿಗೆ ಸಂಬಂಧಪಟ್ಟಂತೆ ಎನ್.ಎಂ.ಪಿ.ಎ. ಕಚೇರಿಯ ಉಪಾಧ್ಯಕ್ಷರ ಬಳಿ ಹೋಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದ್ದುಕಾರನ್ನು ತಡೆದು ವಾಗ್ವಾದ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪಣಂಬೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!