ಮಂಗಳೂರು: ಸುಹಾಸ್ ಶೆಟ್ಟಿ ಒಬ್ಬನ ಹತ್ಯೆ ಕೇಸನ್ನು ಎನ್ಐಎ ತನಿಖೆಗೆ ತಗೊಂಡು ಹೋದ ಇಲ್ಲಿನ ಸಂಸದರು ಇನ್ನೆರಡು ಹತ್ಯೆ ಕೇಸ್ಗಳನ್ನು ಯಾಕೆ ವಹಿಸಲು ಮುಂದಾಗಿಲ್ಲ? ಒಂದು ಪ್ರಕರಣವನ್ನು ಎನ್ಐಎಗೆ ವಹಿಸಿದ ಕುರಿತಂತೆ ರಾಜ್ಯದಲ್ಲಿ ಚರ್ಚೆಯಾಗಬೇಕು. ಹೀಗೆ ಮನಸ್ಸಿಗೆ ಬಂದ ಹಾಗೆ ಮಾಡುವುದಲ್ಲ. ಈ ವಿಚಾರವನ್ನು ನಾನು ವಿಧಾನ ಪರಿಷತ್ಗೆ ತೆಗೆದುಕೊಂಡು ಹೋಗ್ತೇನೆ. ಒಮ್ಮೆ ಸಿಐಡಿ ಹೇಳ್ತೀರಿ, ಒಮ್ಮೆ ಸಿಓಡಿ ಅನ್ತೀರಿ ಆಮೇಲೆ ಸಿಬಿಐ ಅನ್ತೀರಿ. ಎನ್ಐಎ ತನಿಖೆಗೆ ಯಾವ ಪ್ರಕರಣವನ್ನು ಕೊಡಬೇಕು, ಯಾವುದನ್ನು ಕೊಡಬಾರದು ಅಂತ ನಿಯಮವಿದೆ. ನಾವು ಸುಮ್ಮನೆ ಕೂತ್ಕೋತೇವೆ ಅಂತ ತಿಳ್ಕೊಂಡಿದ್ದೇವಾ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಗೆ ವಹಿಸಲು ರಾಜ್ಯ ಸರ್ಕಾರದ ಅನುಮತಿ ಬೇಕಾ? ಈ ಬಗ್ಗೆ ಯೋಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ ಗೃಹ ಸಚಿರ ಡಾ. ಜಿ. ಪರಮೇಶ್ವರ್ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಸುಹಾಸ್ ಶೆಟ್ಟಿಯನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ, ಹತ್ಯಾ ಆರೋಪಿ ಸಫ್ವಾನ್ ಮತ್ತು 8 ಮಂದಿ ಆರೋಪಿಗಳಿಗೆ ಪಿಎಫ್ಐ ನಂಟಿದೆ, ಮರ್ಡರ್ ಆಫ್ ಟೆರರ್ ಆಂಗಲ್ ಎಂದೆಲ್ಲಾ ನೀವು ಬೇಕಾದ ಹಾಗೆ ಬರೆದು ಎನ್ಐಗೆ ವಹಿಸಬೇಕು ಎಂದು ಹೇಳುವ ನೀವು ಇದೇ ರೀತಿ ಇನ್ನಿಬ್ಬರು ಮುಗ್ಧರು ಸತ್ತಿದ್ದಾರಲ್ಲ, ಅವರಿಬ್ಬರ ಕೇಸನ್ನು ಯಾಕೆ ಎನ್ಐಗೆ ವಹಿಸಲು ಹೇಳ್ತಿಲ್ಲ? ಎನ್ಐಎ ಇನ್ವಾಲ್ವ್ ವಿಚಾರಗಳು ಇದ್ದರೆ ಎಲ್ಲಾ ಕೇಸ್ಗಳನ್ನು ಕೊಡಿ. ಪ್ರವೀಣ್ ನೆಟ್ಟಾರ್ ಬಳಿಕ ಫಾಸಿಲ್, ಅಬ್ದುಲ್ ಜಲೀಲ್, ಅಶ್ರಫ್, ಸುಹಾಸ್ ಶೆಟ್ಟಿ, ಅಬ್ದುಲ್ ರಹಿಮಾನ್ ಕೊಲೆ ಆಯ್ತು. ಅದನ್ನೂ ಎನ್ಐಎಗೆ ಕೊಡಬಹುದಲ್ವಾ ಎಂದು ಐವನ್ ಪ್ರಶ್ನಿಸಿದರು.
ರಾಜ್ಯದ ವಿರೋಧ ಪಕ್ಷದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಪೊಲೀಸರು ಹಿಂದೂಗಳಿಗೆ ತೊಂದರೆ, ಬಿಜೆಪಿ ಕಾರ್ಯಕರ್ತರ ಮನೆಗೆ ಹೊಕ್ಕರೆ, ಗೂಂಡಾಗಿರಿ ಮಾಡಿದ್ರೆ ಹೋರಾಟ ಮಾಡ್ತೀವಿ ಎಂದು ಹೇಳಿ ಪೊಲೀಸರ ಬಗ್ಗೆ ಅಸಹ್ಯದಿಂದ ಮಾತಾಡಿ ಅವರ ಮಾನಸಿಕತೆ ಕುಂದಿಸಿದ್ದಾರೆ. ಈ ಹೇಳಿಕೆ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಬಂದಿದೆ. ಬಿಜೆಪಿ ಇದ್ದಾಗಲೂ ಅದೇ ಪೊಲೀಸ್ ಇತ್ತು. ನಾಮ್ಮ ಸರ್ಕಾರ ಇದ್ದಾಲೂ ಅದೇ ಪೊಲೀಸರು ಇದ್ದಾರೆ. ಇವರ ಸರಕಾರ ಇದ್ದಾಗ ಪೊಲೀಸರು ಇದೇತರ ಇದ್ದರಾ? ಪೊಲೀಸರಿಗೆ ಅವರದ್ದೇ ಆದ ಕಾನೂನು ಇದೆ. ತಪ್ಪು ಮಾಡಿದ್ರೆ ಪೊಲೀಸರ ಮೇಲೂ ಕ್ರಮ ಆಗುತ್ತದೆ. ಅವರಿಗೆ ಹಿಂದೂ, ಮಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ್ ಎಲ್ಲ ಒಂದೇ. ಅವರು ಕಾನೂನು ಬಿಒಟ್ಟು ಕೆಲಸ ಮಾಡುವುದಿಲ್ಲ. ಅದೂ ಕೂಡ ಒಬ್ಬ ವಿರೋಧ ಪಕ್ಷದ ನಾಯಕನಾಗಿ, ಸಂಸದೀಯ ಸ್ಥಾನ ಇರುವ ವ್ಯಕ್ತಿ ಆಂದೋಲನ ಮಾಡ್ತೇವೆ ಅಂದ್ರೆ ಇದರ ಅರ್ಥವೇನು? ಪೊಲೀಸರೇ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಕಾನೂನು ಬಿಟ್ಟು ಕೆಲಸ ಮಾಡಿದರೆ ಕೋರ್ಟ್ ಇದೆ. ಪೊಲೀಸರ ಕ್ರಮ ತೆಗೆದುಕೊಳ್ಳದಿದ್ದರೆ ಏನು ಕ್ರಮ ತೆಗೆದುಕೊಳ್ಳಿಲ್ಲ ಎಂದು ಪ್ರಶ್ನಿಸುತ್ತೀರಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ಅಮೃತ್ ಕದ್ರಿ, ಸುಹಾನ್ ಆಳ್ವಾ, ದಿನೇಶ್ ಮುಳೂರು, ಭಾಸ್ಕರ್ ರಾವ್, ಪ್ರೇಮ್ ಬಲ್ಲಾಳ್ ಬಾಗ್, ಜೇಮ್ಸ್ ಶಿವಬಾಗ್, ಸತೀಶ್ ಪೆಂಗಲ್, ಮನುರಾಜ್ ಐವನ್ ಡಿ ಸೌಝ ರವರ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು