ಮೈಸೂರು: ಶಕ್ರಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಫ್ರೀ ಬಸ್ ವ್ಯವಸ್ಥೆ ಮಾಡಿದೆ. ಆದರೆ ಈ ಯೋಜನೆಯನ್ನು ಕೆಲವರು ಮಿಸ್ ಯೂಸ್ ಮಾಡಿ ʻಮಿಸ್ʼ ಆಗುತ್ತಿರುವುದು ಬೆಳಿಕಗೆ ಬರುತ್ತುದೆ. ಇದೀಗ ಅದೇ ರೀತಿ ಮೈಸೂರು ನಂಜನಗೀಡಿನ ಮೂವರು ಪುಟಾಣಿ ಹೆಣ್ಮಕ್ಕಳು ಆಧಾರ ಕಾರ್ಡ್ ಸಮೇತ ನಾಪತ್ತೆಯಾಗಿದ್ದು, ಇವರು ಧರ್ಮಸ್ಥಳಕ್ಕೆ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಅಶೋಕ ಪುರಂ ಬಡಾವಣೆಯ ಮುದ್ದಯ್ಯ ಎಂಬುವರ ಪುತ್ರಿ 11 ವರ್ಷದ ಬಾಲಕಿ ಯಶ, ಸಿದ್ದರಾಜು ಎಂಬುವರ ಪುತ್ರಿ ಸಿಂಚನ 10 ವರ್ಷ, ಮತ್ತೋರ್ವ ಸಿದ್ದರಾಜು ಎಂಬುವರ ಪುತ್ರಿ ಅಮೂಲ್ಯ 10 ವರ್ಷ ನಾಪತ್ತೆಯಾಗಿರುವ ಬಾಲಕಿಯರಾಗಿದ್ದಾರೆ. ಮೂವರು ಬಾಲಕಿಯರು ನಂಜನಗೂಡು ನಗರದ ನೀಲಕಂಠೇಶ್ವರ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ರಾತ್ರಿ ಮಲಗಿ ಬೆಳಗಾಗುವುದರಲ್ಲಿ ಆಧಾರ ಕಾರ್ಡ್ ಮತ್ತು ಬಟ್ಟೆಗಳನ್ನು ತೆಗೆದುಕೊಂಡು ಫ್ರೀ ಬಸ್ ನಲ್ಲಿ ಪರಾರಿಯಾಗಿದ್ದಾರೆ.
ನಂಜನಗೂಡು ನಗರದ ಹಳೆ ಬಸ್ ನಿಲ್ದಾಣದಲ್ಲಿ ಮೂವರು ಬಾಲಕಿಯರು ಧರ್ಮಸ್ಥಳಕ್ಕೆ ತೆರಳುವ ಸರ್ಕಾರಿ ಬಸ್ಸನ್ನು ಹತ್ತಿದ್ದಾರೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಮಕ್ಕಳ ತಂದೆ ತಾಯಿ ಮತ್ತು ಪೋಷಕರು ಆತಂಕಕ್ಕೆ ಒಳಗಾಗಿ ರೋದಿಸುತ್ತಿದ್ದಾರೆ