ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್- ಪ್ರಕರಣ ದಾಖಲು

ಪಣಂಬೂರು: ದಕ್ಷಿಣ ಕನ್ನಡದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಭಾವನೆ ಕೆರಳಿಸುವ ಮಾದರಿಯ ಪೋಸ್ಟ್‌ಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ಹಾಕಲಾಗಿರುವ ಕುರಿತು ʼಬಂಟ್ವಾಳ್ ಹಿಂದೂ ವಾರಿಯರ್ಸ್‌ʼ,ʼಬ್ಯಾರಿ ಮುಸ್ಲಿಂ ಸಾಮ್ರಾಜ್ಯʼ ಮತ್ತು ʼವಾಂಟೆಡ್ ಅಮಾಯಕʼ ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪೇಜ್‌ಗಳ ಅಡ್ಮಿನ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!