ಓಮನ್ ಮಸ್ಕತ್ತಿನ ಕರ್ನಾಟಕ ಜಾನಪದ ಪರಿಷತ್ನ ಅಧ್ಯಕ್ಷರಾಗಿ ಶಿವಾನಂದ ಕೋಟ್ಯಾನ್ ಆಯ್ಕೆ ಸೂಕ್ತ
ಮಂಗಳೂರು: ವಿವಿಧತೆಯಲ್ಲಿ ಏಕತೆ ಎಂಬ ಮಾತಿನ ಪ್ರತಿರೂಪದಂತೆ ವೈವಿಧ್ಯತೆ ಈ ದೇಶದ ಒಂದು ಅಸ್ಮಿತೆ. ಆ ನೆಲೆಯಲ್ಲಿ ನಮ್ಮ ಕನ್ನಡ ನಾಡಿನ ಎಲ್ಲ ಅಸ್ಮಿತೆಗಳ ಸಾಕ್ಷಾತ್ಕಾರವಾಗುವ ನೆಲೆಯಲ್ಲಿ ಸರಕಾರಿ ಅಧಿಕಾರಿಗಳಾಗಿದ್ದುಕೊಂಡು, ಕನ್ನಡದ ಪ್ರಖ್ಯಾತ ಲೇಖಕರೂ, ಜಾನಪದ ವಿದ್ವಾಂಸರೂ, ನಿವೃತ್ತ ಐ.ಎ.ಎಸ್ ಅಧಿಕಾರಿಯೂ ಆಗಿದ್ದ ನಾಡೋಜ ಎಚ್. ಎಲ್. ನಾಗೇಗೌಡರ ಆಸಕ್ತಿಯ ಫಲವಾಗಿ 1979ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆಯಾಯಿತು. ಕಾಸರಗೋಡಿನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಸುಬ್ಬಯ್ಯಕಟ್ಟೆ ಅವರ ಶಿಫಾರಸ್ಸಿನ ಮೇರೆಗೆ ಈಗ ಶಿವಾನಂದ ಕೋಟ್ಯಾನ್ರನ್ನು ಓಮಾನ್ ದೇಶದ ಮಸ್ಕತ್ನಲ್ಲಿ ವಾಸಿಸುತ್ತಿರುವ ಕನ್ನಡ ಜನಪದಾಸಕ್ತರ ಸಭೆಯ ಆಶಯದ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಓಮಾನ್ ಘಟಕದ ಅಧ್ಯಕ್ಷರನ್ನಾಗಿ ಮುಂದಿನ ಆದೇಶದವರೆಗೆ ನೇಮಕ ಮಾಡಲು ಸಂತೋಷವೆನಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಅವರು ನಗರದ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಎಂದರೆ ಅದು ಜೀವನದ ಪದ ಸನಾತನ ಸಂಸ್ಕೃತಿಯ ಶಕ್ತಿಭಾವಂತ ಭರತದ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿವಿಧ ನೆಲೆಗಳಲ್ಲಿ ವಿವಿಧ ಸ್ಥರಗಳಲ್ಲಿ ವಿವಿಧ ಮನೆಗಳಲ್ಲಿ ವಿವಿಧ ಸಮುದಾಯಗಳಲ್ಲಿ ವಿವಿಧ ಜಾತಿಗಳಲ್ಲಿ ವಿವಿಧ ಭಾಷೆಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತನ್ನದೇ ಆದಂತಹ ಅಸ್ಮಿತೆಯನ್ನು ಹೊಂದಿರುವಂತಹಾ ನೆಲೆ, ದಂತವಾದ್ಯ ಅಂದ ತಕ್ಷಣ ನಮಗೆ ಕಾಶ್ಮೀರ, ಭಾಗವತಿಕೆ, ಯಕ್ಷಗಾನ ಅಂದರೆ ಈ ಪ್ರದೇಶ, ಲಾವಣಿ ಸ್ವರೂಪದ ಪದ್ಯಗಳಾದರೆ ಕನ್ಯಾಕುಮಾರಿ- ಕೇರಳವಾದರೆ, ಉತ್ತರ ಕರ್ನಾಟಕದಲ್ಲಿ ಮಹಾರಾಷ್ಟ್ರದಲ್ಲಿ ಲಾವಣಿ ಸ್ವರೂಪದ ಪದ್ಯಗಳಿವೆ. ಹೀಗೆ ಬೇರೆ ಬೇರೆ ಸ್ವರೂಪದಲ್ಲಿ ಉಗಾಬೋಗಗಳು, ನೃತ್ಯ ಭಜನೆಗಳು, ಸಂಕೀರ್ತನೆಗಳು, ಕಂಬಳ, ಸಿರಿಪಾರ್ದನಗಳು, ಗೊಂಬೆಯಾಟ, ತೊದಲು ಗೊಂಬೆಯಾಟ, ಕಾಷ್ಟ ಶಿಲ್ಪ, ಸ್ವರ್ಭ ಶಿಲ್ಪ ಹೀಗೆ ದೇಶದ ವೈವಿಧ್ಯತೆಗಳು ಎಷ್ಟಿದೆ ಎಂದು ಹೇಳಲಾಗದು. ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕದ ಅಮೋಘ ಜನಪದ ವೈವಿಧ್ಯಗಳನ್ನು ಪ್ರಚುರಪಡಿಸುತ್ತಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿ ನಿರ್ಮಾಣ ಗೊಂಡಿರುವ “ಜಾನಪದ ಲೋಕ”ವು ಕನ್ನಡ ನಾಡಿನಲ್ಲಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಡಿನ ಗ್ರಾಮೀಣ ಮತ್ತು ಜನಪದ ಸಂಸ್ಕೃತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಕನ್ನಡ ನಾಡಿನ ಜನಪದ ಪರಂಪರೆಯ ಸಂವರ್ಧನೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ಜಾನಪದ ಕ್ಷೇತ್ರದಲ್ಲಿ ಅಮೂಲ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಯುನೆಸ್ಕೋ ಮಾನ್ಯತೆಯೂ ದೊರೆತ ಹೆಮ್ಮೆ ನಮ್ಮದು ಎಂದರು.
ಕರ್ನಾಟಕ ಜಾನಪದ ಪರಿಷತ್ತು ತನ್ನ ಎಲ್ಲಾ ನಗರ ಕೇಂದ್ರಿತ ಜಾನಪದೀಯ ಚಟುವಟಿಕೆಗಳನ್ನು ಜಿಲ್ಲಾ ಮಟ್ಟ ಮತ್ತು ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಕರ್ನಾಟಕ ರಾಜ್ಯಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಹಾಗೂ ಹೊರ ರಾಷ್ಟ್ರಗಳಲ್ಲಿ ಕೂಡ ಕರ್ನಾಟಕ ಜಾನಪದ ಪರಿಷತ್ತಿನ ಘಟಕಗಳನ್ನು ರಚಿಸಲಾಗುತ್ತಿದೆ. ಕಾಸರಗೋಡಿನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಸುಬ್ಬಯ್ಯಕಟ್ಟೆ ಅವರ ಶಿಫಾರಸ್ಸಿನ ಮೇರೆಗೆ ಈಗ ಶಿವಾನಂದ ಕೋಟ್ಯಾನ್ ಆದ ತಮ್ಮನ್ನು ಓಮಾನ್ ದೇಶದ ಮಸ್ಕತ್ನಲ್ಲಿ ವಾಸಿಸುತ್ತಿರುವ ಕನ್ನಡ ಜನಪದಾಸಕ್ತರ ಸಭೆಯ ಆಶಯದ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಓಮಾನ್ ಘಟಕದ ಅಧ್ಯಕ್ಷರನ್ನಾಗಿ ಮುಂದಿನ ಆದೇಶದವರೆಗೆ ನೇಮಕ ಮಾಡಲು ಸಂತೋಷವೆನಿಸುತ್ತದೆ. ಇದಕ್ಕಾಗಿ ತಮಗೆ ಪರಿಷತ್ತಿನ ಪರವಾಗಿ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಓಮನ್ ಮಸ್ಕತ್ತಿನ ಕರ್ನಾಟಕ ಜಾನಪದ ಪರಿಷತ್ನ ಉಪಾಧ್ಯಕ್ಷರಾಗಿ ಅಬೂಬಕ್ಕರ್ ರಾಯಲ್ ಬೊಳ್ಳೂರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸತೀಶ್ ನಲ್ವಡೆ, ಕೋಶಾಧಿಕಾರಿತಯಾಗಿ ರಘು ಸಾಲ್ಯಾನ್, ಗೌರವ ಸಲಹೆಗಾರರಾಗಿ ಯುವರಾಜ್ ಸಾಲ್ಯಾನ್, ಸರ್ದಾರ್ ಮೊಹಮ್ಮದ್ ಇಮ್ರಾನ್, ಸತೀಶ್ ಬಾರ್ಕೂರು, ಸುರೇಂದ್ರ ಅಮೀನ್, ಅಮರೇಶ್, ಕಾರ್ತಿಕ್ ಕುಂದರ್, ದಿನಕರ್ ಸುವರ್ಣ, ತೀರ್ಥ ಕಟೀಲ್ ಇದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಮ್ಮಿ ಕೊಡಿಯಾಲ್ ಬೈಲ್, ಎ ಆರ್ ಸುಬ್ಬಯ್ಯ ಕಟ್ಟೆ, ರಾಜೇಶ್ ಸ್ಕೈಲಾರ್ಕ್, ರವಿ ನಾಯ್ಕಾಪು, ಶಿವಾನಂದ ಕೋಟ್ಯಾನ್ ಇದ್ದರು.