ಮೂಡಬಿದ್ರೆ: ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಮಿಜಾರು ಮರಕಡ ಎಂಬಲ್ಲಿ ಜೋಡಿಯೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ. ಮೃತರನ್ನು ಬಡಗಮಿಜಾರು ನಿವಾಸಿ ವಿವಾಹಿತೆ ನಮಿಕ್ಷಾ ಶೆಟ್ಟಿ (29)ಹಾಗೂ ಆಕೆಯ ಪ್ರೇಮಿ ನಿಡ್ಡೋಡಿಯ ಪ್ರಶಾಂತ್ ಎಂದು ಹೆಸರಿಸಲಾಗಿದೆ.
ನಮೀಕ್ಷಾಗೆ ಮದುವೆಯಾಗಿದ್ದು ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಪತಿ ಸತೀಶ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಮೂಲತ: ಬಾಗಲಕೋಟೆ ನಿವಾಸಿಯಾಗಿದ್ದ ಮದುವೆಯಾಗಿ ವಿಚ್ಛೇದನ ಆಗಿದೆ ಎನ್ನಲಾಗಿದೆ.
ನಮೀಕ್ಷಾ ಶೆಟ್ಟಿಗೆ ಇನ್ಟಾಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿದ್ದು ಸಂಬಂಧ ಬೆಳೆದಿತ್ತು ಎನ್ನಲಾಗಿದೆ.
ಸಮೀಕ್ಷಾ ಕೊಲೆಗೈದು ಆತ್ಮಹತ್ಯೆ?
ನಮೀಕ್ಷಾ ಪತಿ ಸತೀಶ್ ಶೆಟ್ಟಿ ಪೂನದಲ್ಲಿ ಇರುವಾ ಕಾರಣ ತನ್ನ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಪ್ರಿಯಕರ ಪ್ರಶಾಂತ್ ಅಲ್ಲಿನ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಇದನ್ನು ತಂದೆ ವಿರೋಧಿಸುತ್ತಿದ್ದರಿಂದ ಸಮೀಕ್ಷಾ ಕೂಡಾ ಪ್ರಶಾಂತ್ ನನ್ನು ದೂರ ಮಾಡಿದ್ದಳು. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದು ಈ ಸಂದಭ೯ ಇಬ್ಬರ ಮಧ್ಯೆ ಜಗಳವಾಗಿ ಪಕ್ಕದಲ್ಲಿದ್ದ ಬಾವಿಗೆ ಆಕೆಯನ್ನು ದೂಡಿದ್ದು ಇದನ್ನು ನಮೀಕ್ಷಾಳ ಪುತ್ರ ನೋಡಿದ್ದಾನೆ ಇದನ್ನು ಕಂಡ ಪ್ರಶಾಂತ್ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಈ ಪ್ರಕರಣದಿಂದ ಮಕ್ಕಳಿಬ್ಬರು ಅನಾಥರಾಗುವಂತಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ.ಮೂಡಬಿದ್ರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.