ಅಬ್ದುಲ್‌ ರಹ್ಮಾನ್‌ ಹತ್ಯೆ ಪ್ರಕರಣ: ಸುರತ್ಕಲ್‌ನಲ್ಲಿ ಬಸ್‌ಗೆ ಕಲ್ಲು ತೂರಾಟ

ಮಂಗಳೂರು: ಕೊಳತ್ತಮಜಲುವಿನ ಯುವಕ ಅಬ್ದುಲ್‌ ರಹಿಮಾನ್ ಕೊಲೆ ಕೃತ್ಯ ಖಂಡಿಸಿ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಸುರತ್ಕಲ್‌ನಲ್ಲಿ ಬಸ್‌ಗೆ ಕುಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ.


ಮಂಗಳೂರು, ಸುರತ್ಕಲ್‌, ಮುಕ್ಕ, ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಹೆಸರಿನ ಬಸ್‌ಗೆ ಇಂದು ಸುರತ್ಕಲ್‌ ಸೂರಸ್‌ ಹೋಟೆಲ್‌ ಸಮೀಪ ಕಿಡಿಗೇಡಿಗಳು ಕಲ್ಲು ತೂರಾಟ ನೆಡೆಸಿದ್ದಾರೆ. ಇದರಿಂದಾಗಿ ಬಸ್‌ನ ಮುಂಭಾಗದ ಕನ್ನಡಿಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಇದರಿಂದಾಗಿ ಬಸ್‌ ಸಂಚಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಯಾಣಿಕರನ್ನು ಪರ್ಯಾಯ ಬಸ್‌ನಲ್ಲಿ ಗಮ್ಯ ಸ್ಥಾನಕ್ಕೆ ಕಳುಹಿಸಲಾಗಿದೆ. ಸುರತ್ಕಲ್‌ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

error: Content is protected !!