ಕಡಿಮೆ ಅಂಕ ಬಂದಿದ್ದಕ್ಕೆ ಮನೆ ತೊರೆದಿದ್ದ ಬಾಲಕಿಯರು ಹೋಗಿದೆಲ್ಲಿಗೆ?

ಕಾಸರಗೋಡು: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ನೋವಿನಿಂದ ಮನೆ ಬಿಟ್ಟು ತೊರೆದಿದ್ದ ಹೆಣ್ಮಕ್ಕಳು ಕೊನೆಗೂ ಪತ್ತೆಯಾಗಿದ್ದು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

AI Generated Photo

ಇತ್ತೀಚೆಗೆ ಕೇರಳದಲ್ಲಿ ಪ್ಲಸ್‌ ಟು(ಪಿಯುಸಿ ಸಮಾನ) ಪರೀಕ್ಷೆಯ ಫಲಿತಾಂಶ ಬಂದಿದ್ದು, ಕಣ್ಣೂರಿನ 18 ವರ್ಷದ ಬಾಲಕಿಗೆ ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಆಕೆ ತನ್ನ 14 ವರ್ಷದ ಸಂಬಂಧಿ ಬಾಲಕಿಯೊಂದಿಗೆ ಮೇ 26ರಂದು ಮನೆ ತೊರೆದಿದ್ದಳು. ಪೋಷಕರು ಆತಂಕದಿಂದ ಕಣ್ಣೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಕಣ್ಣೂರು ಪೊಲೀಸರು ರೈಲ್ವೆ ಸೇರಿ ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳಿಗೆ ತುರ್ತು ಸಂದೇಶ ರವಾನಿಸಲಾಗಿತ್ತು. ಪೊಲೀಸರು ಸಾಕಷ್ಟು ಹುಡುಕಾಟ ನೆಡೆಸಿದಾಗ ನಿನ್ನೆ ಮುಂಜಾನೆ ನಸುಕಿನ 1 ಗಂಟೆ ಸುಮಾರಿಗೆ ಸರಗೋಡು ರೈಲು ನಿಲ್ದಾಣಕ್ಕೆ ಬಂದ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಹೆಣ್ಮಕ್ಕಳು ಪತ್ತೆಯಾಗಿದ್ದಾರೆ. ಇದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಡಿಮೆ ಅಂಕ ಬಂದಿರುವುದರಿಂದ ಪೋಷಕರ ಮುಖ ಹೇಗೆ ನೋಡುವುದೆಂಬ ಅಳುಕಿನಿಂದ ಗೊತ್ತು ಗುರಿ ಇಲ್ಲದಂತೆ ರೈಲು ಹತ್ತಿದ್ದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ.

ಪರೀಕ್ಷೆ, ಫಲಿತಾಂಶ ಎನ್ನುವುದು ಕಲಿಕೆಗೆ ಒಂದು ವೇದಿಕೆ ಅಷ್ಟೆ, ಅದರಿಂದಲೇ ಭವಿಷ್ಯ ನಿರ್ಧಾರವಾಗುವುದಿಲ್ಲ. ಅಂಕ ಎನ್ನುವುದು ಕೇವಲ ಒಂದು ನಂಬರ್‌ ಅಷ್ಟೆ ಹೆತ್ತವರು ಮಕ್ಕಳಿಗೆ ಅಂಕದ ವಿಚಾರದಲ್ಲಿ ಒತ್ತಡ ಹೇರಬಾರದು. ಅವರ ಭವಿಷ್ಯವನ್ನು ಅವರೇ ನೋಡಿಕೊಳ್ಳುತ್ತಾರೆ. ಹೆತ್ತವರು ಕೇವಲ ಮಾರ್ಗದರ್ಶನ ನೀಡಬೇಕು. ಮಕ್ಕಳು ಸೋತಾಗ ಅವರ ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡಬಾರದು ಎಂದು ಹಿರಿಯ ಪೊಲೀಸರು ಮಕ್ಕಳ ಹೆತ್ತವರಿಗೆ ಬುದ್ಧಿವಾದ ಹೇಳಿದ್ದಾರೆ.

error: Content is protected !!