ಸಂಭಾಲ್‌ ಮಸೀದಿಯೋ ದೇವಸ್ಥಾನವೋ?: ಮತ್ತೊಂದು ಸಮೀಕ್ಷೆಗೆ ಹೈಕೋರ್ಟ್‌ ಅಸ್ತು

ನವದೆಹಲಿ: ಸಂಭಾಲ್ ಜಾಮಾ ಮಸೀದಿ ಮತ್ತು ಹರಿಹರ ಮಂದಿರ ವಿವಾದ ಪ್ರಕರಣದ ಸಂಬಂಧ ಅಲಹಾಬಾದ್ ಹೈಕೋರ್ಟ್ ಪರಿಷ್ಕರಣಾ ಅರ್ಜಿಯನ್ನು ತಿರಸ್ಕರಿಸಿ ಸಮೀಕ್ಷೆ ನಡೆಸುವಂತೆ ತೀರ್ಪು ನೀಡಿದೆ. ಇದರಿಂದಾಗಿ ಮತ್ತೊಮ್ಮೆ ಸಂಭಲ್‌ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯಲಿದೆ. ಮಸೀದಿ ಸಮಿತಿಯು 2024 ರ ನವೆಂಬರ್ 19 ರಂದು ಸಿವಿಲ್ ನ್ಯಾಯಾಲಯ ನೀಡಿದ ಸರ್ವೆ ಆದೇಶವನ್ನು ಪ್ರಶ್ನಿಸಿತ್ತು.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಅಲಹಾಬಾದ್ ಹೈಕೋರ್ಟ್ ಪೀಠವು ಮರು ಸಮೀಕ್ಷೆ ನಡೆಸಲು ತೀರ್ಪು ನೀಡಿದೆ. ಸಮೀಕ್ಷೆಯ ಮುಂದಿನ ಪ್ರಕರಣದ ವಿಚಾರಣೆ ಸಂಭಾಲ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಲು ಹೈಕೋರ್ಟ್‌ ಸೂಚಿಸಿದೆ.

ಮಸೀದಿ ಸಮಿತಿಯು ಸರ್ವೆ ಆದೇಶಕ್ಕೆ ತಡೆ ನೀಡುವಂತೆ ಒತ್ತಾಯಿಸಿತ್ತು. ಮೇ 13 ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವುದನ್ನು ಇಂದಿಗೆ ಕಾಯ್ದಿರಿಸಿತ್ತು.

ಹಿಂದೂ ಕಡೆಯವರು ಇದು ಹರಿಹರ ದೇವಸ್ಥಾನವಾಗಿದ್ದು, ಇದರ ಮೇಲೆ ಮಸೀದಿ ಸಮಿತಿಯ ನಿರ್ವಹಣೆಯನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಸಂಭಾಲ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಮೇರೆಗೆ ಸಂಭಾಲ್ ಸಿವಿಲ್ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಆದರೆ ಮುಸ್ಲಿಂ ಕಡೆಯವರು ಪ್ರಶ್ನಿಸಿತ್ತು. ಇದರಿಂದಾಗಿ 8 ಜನವರಿ 2025 ರಿಂದ, ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಸಿವಿಲ್ ನ್ಯಾಯಾಲಯದ ಸರ್ವೆ ಆದೇಶವನ್ನು ತಡೆಹಿಡಿಯಿತು.

ಇದಕ್ಕೂ ಮೊದಲು, ಏಪ್ರಿಲ್ 28 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಮೀಕ್ಷೆಯ ಕುರಿತು ತನ್ನ ಉತ್ತರವನ್ನು ಸಲ್ಲಿಸಿ 48 ಗಂಟೆಗಳ ಒಳಗೆ ವರದಿ ಮಾಡುವಂತೆ ನಿರ್ದೇಶಿಸಿತ್ತು.
ಕಳೆದ ವರ್ಷ ನವೆಂಬರ್ 24ರಂದು, ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಸಂಭಾಲ್‌ನಲ್ಲಿ ಗಲಾಟೆ ಉಂಟಾಯಿತು, ಇದರಲ್ಲಿ 5 ಜನರು ಸಾವನ್ನಪ್ಪಿದ್ದರೆ, 29 ಪೊಲೀಸರು ಗಾಯಗೊಂಡರು. ಈ ಘಟನೆಯ ನಂತರ, ಸಂಭಾಲ್‌ನಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಸಂಪೂರ್ಣ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಗಿದೆ.

error: Content is protected !!