ಮಂಗಳೂರು: ಮಾವಿನ ಹಣ್ಣಿನ ಲೋಡ್ ತುಂಬಿದ್ದ ಲಾರಿ ಹೊಂಡಕ್ಕೆ ಬಿದ್ದ ಘಟನೆ ಪಚ್ಚನಾಡಿ ಬೋಂದೆಲ್ ಸಂಪರ್ಕ ರಸ್ತೆಯಲ್ಲಿ ನಡೆದಿದೆ.
ಉಡುಪಿಯ ಮಾವು ಮೇಳಕ್ಕೆ ಹೋಗುತ್ತಿದ್ದ ಚಾಲಕ ರಫೀಕ್ ನ ನಿಯಂತ್ರಣ ತಪ್ಪಿ ವಾಹನ ಹೊಂಡಕ್ಕೆ ಬಿದ್ದಿದೆ. ವಾಮಂಜೂರಿನಿಂದ ಪಚ್ಚನಾಡಿಯತ್ತ ಸಂಚರಿಸುತ್ತಿದ್ದ ವೇಳೆಯಲ್ಲಿ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ರಫೀಕ್ ಉಳಾಯಿಬೆಟ್ಟು ಅವರಿಗೆ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ರಫೀಕ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.