ಶಿರ್ವ: ಕೆಎಸ್ಆರ್ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಬಸ್ಸಿನ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಶಿರ್ವ – ಮುಂಬೈನಿಂದ ಉಡುಪಿ-ಶಿರ್ವ-ಮೂಡುಬಿದಿರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಎ. 21 ರಂದು ಮುಂಜಾನೆ ನಡೆದಿದೆ.
ಮೃತರನ್ನು ಕುಮಟಾ ಮೂಲದ ಪ್ರಯಾಣಿಕ ಸುಮಾರು 45 ವರ್ಷ ಪ್ರಾಯದ ಸತ್ಯ ಭಂಡಾರಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಅಂಬುಲೆನ್ಸ್ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಸತ್ಯ ಭಂಡಾರಿ ಪ್ರಯಾಣದ ಸಂಧರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಕೋವಿಡ್ ಬಳಿಕ ಈ ರೀತಿ ಹಠಾತ್ ಸಾವುಗಳು ಜನತರನ್ನು ನಿದ್ದೆಗೆಡಿಸಿದೆ.