ಮಂಗಳೂರು: ಸೈಂಟ್ ಅಲೋಶಿಯಸ್ ಪ್ರತಿಷ್ಠಾನಗಳು ಮತ್ತು ಸೈಂಟ್ ಅಲೋಶಿಯಸ್ ಕಾಲೇಜ್ ಅಲ್ಯೂಮ್ಮಿ ಅಸೋಸಿಯೇಶನ್ (SACAA) ಸಂಯುಕ್ತವಾಗಿ “ಅಲೋಶಿಯನ್ ಅಲ್ಯೂಮ್ಮಿ ಪ್ರಶಸ್ತಿ -2025” ಕಾರ್ಯಕ್ರಮವನ್ನು ಫೆಬ್ರವರಿ 8, 2025ರಂದು ಕಾಲೇಜಿನ LCRI ಬ್ಲಾಕ್ನ ಸಭಾಂಗಣದಲ್ಲಿ ಆಯೋಜಿಸುತ್ತಿದೆ. ಸೈಂಟ್ ಅಲೋಶಿಯಸ್ ಪ್ರತಿಷ್ಠಾನವು ತನ್ನ ಹಳೆಯ ವಿದ್ಯಾರ್ಥಿಗಳ ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತದೆ. ಈ ಪ್ರತಿಷ್ಠಿತ ಸಂಸ್ಥೆಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆ ಮಾಡಿ, ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈಗಿನ ವಿದ್ಯಾರ್ಥಿಗಳು ಅವರ ಸಾಧನೆಗಳಿಂದ ಪ್ರೇರಣೆ ಪಡೆಯಲು ಹಳೆಯ ವಿದ್ಯಾರ್ಥಿಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ 2008ರಲ್ಲಿ ಪ್ರಾರಂಭಿಸಲಾಯಿತು. 2011ರವರೆಗೆ ಪ್ರತಿ ವರ್ಷ ಆಯೋಜಿಸಲಾಗಿತ್ತು ಮತ್ತು 2014ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. 2014 ರಿಂದ ಈ ಪ್ರಶಸ್ತಿಯನ್ನು SACAA ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮ ಸಂಯೋಜಕ ಎನ್.ಜಿ.ಮೋಹನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈ ಪ್ರಶಸ್ತಿಯಡಿ 45 ಜನ ಪ್ರಸಿದ್ದ ಅಲೋಶಿಯನ್ಗಳನ್ನು ಗೌರವಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಕೆಲವು ಗಣ್ಯ ವ್ಯಕ್ತಿಗಳು ಡಾ.ಎನ್. ವಿನಯ ಹೆಗ್ಡೆ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಅನಂತ ಕೃಷ್ಣ (ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರು), ದೇವಿ ಪ್ರಸಾದ್ ಶೆಟ್ಟಿ, ಯೆನೇಪೋಯ ಅಬ್ದುಲ್ಲಾ ಕುಂಞ, ಜಯರಾಮ್ ಭಟ್ (ಕರ್ನಾಟಕ ಬ್ಯಾಂಕಿನ ಮಾಜಿ ಸಿಇಒ), ಲೆಫ್ಟಿನೆಂಟ್ ಜನರಲ್ ನಂದಾ, ಪದ್ಮಭೂಷಣ ಕೆ.ಕೆ. ವೇಣುಗೋಪಾಲ್ (ಭಾರತ ಸರ್ಕಾರದ ಸೊಲಿಸಿಟರ್ ಜನರಲ್), ಪದ್ಮಭೂಷಣ ಕೆ.ವಿ.ಕಾಮತ್ (ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು) ಮತ್ತು ಎಂ.ವಿ. ನಾಯರ್ (ಕಾರ್ಪೊರೇಷನ್ ಬ್ಯಾಂಕಿನ ಮಾಜಿ ಅಧ್ಯಕ್ಷರು). ಭಾರತ ಸರ್ಕಾರವು ಇತ್ತೀಚೆಗೆ ಎಂ.ವಿ. ನಾಯರ್ ಅವರನ್ನು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಸಾಸ್ಟಕ್ಟರ್ ಅಂಡ್ ಡೆವಲಪ್ಟೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಈ ವರ್ಷ ಆಯ್ಕೆ ಸಮಿತಿಯು ವಿವಿಧ ಅರ್ಜಿಗಳನ್ನು ಪರಿಶೀಲಿಸಿ ಉದ್ಯಮಿ ಎಂ.ಕನ್ಯಾನ ಸಾದಾಶಿವ ಶೆಟ್ಟಿ, ಲೂಸಿ ಮರಿಯಪ್ಪ,ಆಸ್ಕರ್ ಕಾಂಸೆಸಾವ್, ಗುರುಕಿರಣ್, ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾ ಅವರನ್ನು ಪ್ರಶಸ್ತಿ ವಿಜೇತರನ್ನಾಗಿ ಘೋಷಿಸಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರೆವ್. ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ., ರೆಕ್ಟರ್, ರೆವ್. ಡಾ. ಪ್ರವೀಣ್ ಮಾರ್ತಿಸ್ ಎಸ್.ಜೆ, ಪ್ರಾಂಶುಪಾಲರು, ಅನಿಲ್ ಕುಮಾರ್ ಜಿ ಉಪಸ್ಥಿತರಿದ್ದರು.