ಪಡುಬಿದ್ರಿ: ಅಕ್ರಮ ಜಾನುವಾರಗಳ ಸಾಗಾಟ; ಇಬ್ಬರು ವಶಕ್ಕೆ

ಪಡುಬಿದ್ರಿ: ಅಕ್ರಮ ದನ ಸಾಗಣೆ ಮತ್ತು ಪ್ರಾಣಿ ಹಿಂಸೆ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ಪಡುಬಿದ್ರಿ ಪೊಲೀಸರು ಭಾನುವಾರ(ಮೇ 17) ಬೆಳಗಿನ ಜಾವ ನಡೆದಿದೆ.

ಕಾಪು ತಾಲೂಕಿನ ನಡ್ಸಾಲು ಗ್ರಾಮದ ಅಬ್ಬಾಸ್ ಗುಡ್ಡೆ ನಿವಾಸಿ ಇಸ್ಮಾಯಿಲ್ (42) ಮತ್ತು ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ನಿವಾಸಿ ಕರ್ನಿರೆ ಮೊಹಮ್ಮದ್ (62) ಬಂಧಿತ ಆರೋಪಿಗಳು.

ಪೊಲೀಸರ ಪ್ರಕಾರ, ಮೇ 17 ರಂದು ಬೆಳಿಗ್ಗೆ 6.40 ರ ಸುಮಾರಿಗೆ ಕಾರ್ಕಳದಿಂದ ಪಡುಬಿದ್ರಿ ಕಡೆಗೆ ದನಗಳನ್ನು ಸರಕು ವಾಹನದಲ್ಲಿ ಸಾಗಿಸಲಾಗುತ್ತಿದೆ ಎಂದು ಪಿಎಸ್ಐ ಅನಿಲ್ ಕುಮಾರ್ ಟಿ ನಾಯಕ್ ಅವರಿಗೆ ಮಾಹಿತಿ ಸಿಕ್ಕಿತು. ಖಚಿತ ಮಾಹಿತಿ ಮೇರೆಗೆ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನ ಗ್ರಾಮದ ಕಾಜನಡ್ಕದಲ್ಲಿ KA-19-A-6151 407 ಟರ್ಬೊ ವಾಹನವನ್ನು ತಡೆಯಲಾಗಿದೆ.

ತಪಾಸಣೆಯ ಸಮಯದಲ್ಲಿ, ಪ್ರಾಣಿ ಕಲ್ಯಾಣ ನಿಯಮಗಳನ್ನು ಉಲ್ಲಂಘಿಸಿ ಮೂರು ದನಗಳನ್ನು ಕಟ್ಟಿಹಾಕಿ ಕ್ರೂರ ರೀತಿಯಲ್ಲಿ ಸಾಗಿಸುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಮೂಲಗಳು ಹೇಳುವಂತೆ ಇಸ್ಮಾಯಿಲ್ ಅಕ್ರಮ ಗೋ ಸಾಗಣೆ ಮತ್ತು ಗೋಹತ್ಯೆ ನಿಷೇಧ ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ. ಬರ್ಕೆ ಪೊಲೀಸ್ ಠಾಣೆ , ಮುಲ್ಕಿ ಪೊಲೀಸ್ ಠಾಣೆ , ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ , ಸುರತ್ಕಲ್ ಪೊಲೀಸ್ ಠಾಣೆ , ಕಾರ್ಕಳ ಪಟ್ಟಣ ಪೊಲೀಸ್ ಠಾಣೆ ಮತ್ತು ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ಬಾಕಿ ಇವೆ.

ವಶಪಡಿಸಿಕೊಂಡ ವಾಹನ ಮತ್ತು ರಕ್ಷಿಸಲಾದ ಜಾನುವಾರುಗಳ ಒಟ್ಟು ಮೌಲ್ಯ ಸುಮಾರು 4.25 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!