ಸಜಿಪದಲ್ಲಿ ಮಸೀದಿ ವಿಚಾರದಲ್ಲಿ ಭಿನ್ನಾಭಿಪ್ರಾಯ: ಮಾರಕಾಸ್ತ್ರಗಳಿಂದ ಬಡಿದಾಟ!

ಮಂಗಳೂರು: ಮಸೀದಿ‌ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಎರಡು ತಂಡಗಳ‌ ಸದಸ್ಯರು ಹೊಡೆದಾಡಿಕೊಂಡ ನಡೆದ ಘಟನೆ ಮಂಗಳೂರಿನ ಉಳ್ಳಾಲ ಹೊರವಲಯದ ಸಜೀಪ‌ನಡು ಎಂಬಲ್ಲಿ ನಡೆದಿದೆ.

ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕತ್ತಿ, ದೊಣ್ಣೆ, ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಮಸೀದಿ ಬಳಿ ಹಲ್ಲೆ ನಡೆದ ಬಳಿಕ ಓರ್ವನ ಮನೆಗೆ ಬಂದು ಅಲ್ಲಿದ್ದ ಮಹಿಳೆಯರು ಮಕ್ಕಳ‌ ಮುಂದೆ ಹಲ್ಲೆ‌ ನಡೆಸಲಾಗಿದೆ. ಮಸೀದಿ‌ ಅಧ್ಯಕ್ಷನೂ ಈ‌ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಮತ್ತು ಆರ್ಮ್ಸ್‌ ಆಕ್ಟ್‌ ಅಡಿ ಅಡಿ ದಾಖಲಾಗಿದೆ.

error: Content is protected !!