ಮಂಗಳೂರು: ಗಾಂಧಿ ನಗರದ ಎಂಟನೆಯ ಅಡ್ಡ ರಸ್ತೆಯಲ್ಲಿ ನಾರಾಯಣ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.


ಸುರೇಖ ಪೈ ಮಾಲೀಕತ್ವದ ವಸತಿನಿಲಯವಾಗಿದ್ದು, ಸುಮಾರು ಒಂದು ಘಂಟೆಗಳ ಕಾಲ ಬೆಂಕಿನಂದಿಸುವ ಕಾರ್ಯಚರಣೆಯಲ್ಲಿ ಅಗ್ನಿ ಶಾಮಕದಳ ತೊಡಗಿಕೊಂಡಿದ್ದರು. ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿಗಳು ನಷ್ಟವಾಗಿದೆ. ಆದರೆ ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.