ಸಾಲ ವಾಪಸ್ ಕೇಳಿದ್ದಕ್ಕೆ ಸಿನಿಮಾ ಸ್ಟೈಲ್ ನಲ್ಲಿ ಇಂಜಿನಿಯರ್ ನ ಬರ್ಬರ ಹತ್ಯೆ !!

ಬೆಂಗಳೂರು: ನಗರದಲ್ಲಿ ಇಂಜಿನಿಯರ್ ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕುಪ್ಪಂ ಮೂಲದ ನಿವಾಸಿ ಶ್ರೀನಾಥ್ ಹತ್ಯೆಗೊಳಪಟ್ಟ ವ್ಯಕ್ತಿ.

ಸಾಲ ಕೊಟ್ಟಿರುವುದನ್ನು ವಾಪಸ್ ಕೇಳಿದ್ದಕ್ಕೆ ಆರೋಪಿ ಕೊಲೆ ಮಾಡಿ ನಾಟಕ ಮಾಡಿದ್ದಾನೆ. ಇಂಜಿನಿಯರನ್ನು ಕೊಲೆಗೈದು ಮೃತ ದೇಹವನ್ನು ಮನೆಯಲ್ಲಿಯೇ ಅರೋಪಿ ಹೂತು ಹಾಕಿದ್ದು, ಅತ್ತಿಬೆಲೆ ಪೊಲೀಸರ ತನಿಖೆಯ ವೇಳೆ ಕೊಲೆ ರಹಸ್ಯ ಇದೀಗ ಬೆಳಕಿಗೆ ಬಂದಿದೆ.

ಅತ್ತಿಬೆಲೆಯಲ್ಲಿ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಶ್ರೀನಾಥ್ ವಾಸವಿದ್ದರು. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್ ಶ್ರೀನಾಥ್ ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ ಪ್ರಭಾಕರ್ ಗೆ 40,00,000 ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್ ಗೆ ಕೇಳಿದ್ದಾನೆ.

ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹಣ ಕೊಡುತ್ತೇನೆ ಬಾ ಅಂತ ಹೇಳಿ ಆಂಧ್ರದ ಕುಪ್ಪಂಗೆ ಶ್ರೀನಾಥ್ ನನ್ನು ಕರೆಸಿಕೊಂಡಿದ್ದರು. ಕುಪ್ಪಂಗೆ ಹೋಗುವ ಮುನ್ನ ಶ್ರೀನಾಥ್ ಪತ್ನಿಗೆ ಹೇಳಿ ಹೋಗಿದ್ದರು ತಲೆಗೆ ಸುತ್ತಿನಿಂದ ಹೊಡೆದು ಮನೆಯಲ್ಲಿ ಗುಂಡಿ ತೋಡಿ ಆತನ ಮೃತ ದೇಹವನ್ನು ಹೂತು ಹಾಕಿದ್ದಾರೆ. ಇದಕ್ಕೆ ಪ್ರಭಾಕರ್ ಗೆ ಸ್ನೇಹಿತ ಜಗದೀಶ್ ಸಾತ್ ಕೊಟ್ಟಿದ್ದ.

ಶ್ರೀನಾಥ್ ಪತ್ನಿ ಪ್ರಭಾಕರನನ್ನು ಕೇಳಿದಾಗ ಆತ ಬಂದಿಲ್ಲ ಅಂತ ನಾಟಕ ಮಾಡಿದ್ದಾನೆ, ಎರಡು ದಿನವಾದರೂ ಮನೆಗೆ ಬಾರದಿದ್ದಾಗ ಪತ್ನಿ ಅತ್ತಿಬೆಲೆ ಠಾಣೆಗೆ ದೂರು ನೀಡಿದ್ದಾರೆ. ಅತ್ತಿಬೆಲೆ ಪೊಲೀಸರು ಪ್ರಭಾಕರ್ ಮತ್ತು ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ ವಶಕ್ಕೆ ಪಡೆದು ವಿಚಾರನೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕುಪ್ಪನ್ನ ಮನೆಯಲ್ಲಿ ಶವ ಹೂತು ಹಾಕಿರುವ ಕುರಿತು ಸತ್ಯ ಬಿಚ್ಚಿಟ್ಟಿದ್ದಾರೆ.

error: Content is protected !!